Showing posts with label Kannada. Show all posts
Showing posts with label Kannada. Show all posts

Tuesday, October 25, 2016

ಇಂದೇ ಸುದಿನ...

Years ago, when I was still a young girl participating in dance competitions, my mother had taught us - my sister and me and a few friends - a dance to a song. The song was about gopikas eager to meet Krishna on the banks of the Yamuna. We danced to it, dressed in langa-blouse and a veil on our heads. I think we had some painted pots also, to complete the effect of the gopikas. All I remember from that dance competition is how pretty my sister looked, with kohl in her eyes and a bright light-green duppatta covering her hair.

The song went something like this - "ಇಂದೇ ಸುದಿನ ಬನ್ನಿ ಸಖಿಯರೇ ಹೋಗುವ ಯಮುನಾ ತೀರದೆಡೆಗೆ ". I knew the song was penned by my grandfather. However, the music was distinctly not South-Indian. I was not too curious about it at that time but got to know the story about that song later, from my grandmother.

My aunt, herself a teacher, had taught a few neighboring children a dance to perform at a function in the layout. It was a Hindi song. The kids learned the dance with great enthusiasm and were looking forward to performing at the function. A couple of days before the performance, they got to know something shocking. A few miscreants - Kannada warriors got to know that there was going to be a dance performance set to a Hindi song, and they had decided to create trouble. The kids were crestfallen. After practising for so many days, getting ready with costumes and telling all their friends about the dance, their program was about to be canceled because it was simply not safe to dance to a Hindi song.

My grandfather had a brilliant idea then. He immediately composed a song in Kannada which could be sung to the same tune and matched the dance steps. The kids practised a few times with the changed lyrics in Kannada. The adaptation was beautiful and the presentation on stage was a huge success. After watching the dance performance, the miscreants went back home with greater wisdom in their heads and their pockets still bulging with the rotten tomatoes they had intended to throw at the dancing children.

The song is beautiful and set to the rāga Kāpi. It does not adhere completely to the metrical rules of Kannada poetry, but has great word-ly beauty - like "ಜುಳು ಜುಳು ಹರಿಯುವ ಯಮುನೆಯ ಕಲ ಕಲ ನಾದವ ಕೇಳುವ ಬನ್ನಿ ", "ಜಗದ ಜಂಜಡವ ಮರೆಯುವ ಬನ್ನಿ ಜಗನ್ನಾಥನೆಡೆಗೆ".

I happen to be humming this song since morning and wanted to share the story here. 

Tuesday, October 09, 2012

To Daffodils


I had written this some time back for Padyapaana, but did not publish it there because I was too late. It is a translation of the famous poem 'To Daffodils' by Robert Herrick.
ಕಳೆವ ಮುನ್ನವೆ ಹೊತ್ತು, ಓಡೋಡಿ ಹೋಗದಿರಿ
ಎಳೆಬಿಸಿಲ ತಂಪಿನಲಿ ನಗುವ ಹೂವುಗಳೇ !
ಅಳುವುಕ್ಕುವುದು ನೀವು ಸೊರಗುವುದ ನೋಡುತ್ತೆ
ನಳನಳಿಸಿ ಗಿಡಗಳಲಿ ನವಸುಮಗಳೇ! !

ತಡೆಯಿರೈ! ನಿಲ್ಲಿರೈ! ಸಂಜೆಯಾಗುವ ತನಕ
ಪಡುವಣದಿ ರವಿತೇಜ ಮರೆಯಾಗುವನಕ
ಕೂಡಿ ನಿಮ್ಮನು ನಾವು ಬರುವೆವೈ, ನಮ್ಮೊಡನೆ
ಮಾಡಿ ನೀವ್ ಸಂಧ್ಯೆಯೊಳಗರ್ಚನೆಯನು

ನಿಮ್ಮಂತೆ ಕ್ಷಣಿಕವೈ ನಮ್ಮ ಬಾಳೂ ಕೂಡ
ನಮ್ಮಯ ವಸಂತವೂ ಚಿರವಲ್ಲವಲ್ಲ!
ನಮ್ಮ ಜವದೇಳಿಗೆಗೆ ಜವರಾಯ ಕಾದಿರುವ
ಎಮ್ಮ ತೆರವೂ ಕೂಡ ನಿಮ್ಮಂತೆಯೇ

ಮುಗಿಸುವೆವು ನೀವು ಜೀವನ ಮುಗಿಸುವಂತೆ, ಬೇ
ಸಗೆಯ ಮಳೆ ಧರಣಿಯಿಂದಾವಿಯಾದಂತೆ
ನಗುವೆಲೆಯ ಮೇಲಿನಿಬ್ಬನಿಯ ಮುತ್ತುಗಳೆಲ್ಲ
ಮುಗಿಲ ಮಡಿಲನು ಸೇರಿ ಕಾಣೆಯಾದಂತೆ ||

Sunday, February 05, 2012

Māyūrī modayati manāṃsi

It was some years ago, when I was still young and impressionable, that I first laid my hands on the book 'Mayūra' by Sri.Devudu Narasimha Shastri. I remember that I had liked the book a lot, though some of the intricacies in plot and emotion were beyond my comprehension. For a long time I had wanted to re-read the book, and recently my wish came true*.

The original story of 'Mayūra' is a fairly familiar one to many of us, from our History classes. An orphan boy raised as a brahmin, Mayura Sharma lives in Kanchi, belonging to the Pallava kingdom. He has an altercation with one of the princes of the kingdom and is forced to leave Kanchi. The rest of the story is about how he overthrows the regime of the Pallavas and establishes the Kadamba kingdom. History tells us this much, and it takes a master craftsman like Devudu to make a beautiful sculpture out of this fine granite. He has added his own details - ministers loyal to the old king, wars fought with the brain and not with brawn, an enemy everyone would wish to have and a love interest. The result is a book that guarantees hours of absorbing reading.

'Mayura' is not as heavy as Devudu's other books**. The language is definitely a lot lighter (more Kannada and less Sanskrit :)). One can see expressions like "ತಲೆ ಕುಟ್ಟ" and "ಬೊಡ್ಡೀ ಮಕ್ಕಳು". Rural Kannada is used very effectively. There is more action and less description and hence this book is much more egalitarian than his other three novels.

In his descriptions, Devudu has followed the path of our classical writers. One cannot forget the way he describes the cow Nandini in his mahabrAhmaNa. It is easy to see the touch of Kalidasa there (बिभ्रती श्वेतरोमाङ्कं सन्ध्येव शशिनं नवम्). It is so even in this book. When Mayura asks how his mother looked, Narasimhadatta replies "ನೇರಳೆ ಹಣ್ಣಿಗಷ್ಟು ಕಪ್ಪನ್ನು ಕೊಡುವ ಕೂದಲು, ದಂತವನ್ನು ಚಿನ್ನದಿಂದ ತೊಳೆದಂತೆ ಮೈಬಣ್ಣ..". As in his other books, the descriptions of nature are lyrical. His writing is poetry in prose. The beauty of this book is that it is definitely a work of great erudition, but also maintains simplicity.

Devudu had an uncanny eye for the beauty of words. He has used a couple of Kalidasa's nuggets to great advantage in Mayura. The first instance is when the Pallava princess Premavati suspects that the merchant Gupta is Mayura himself, and receives a present from him. The present is a peacock (mayUra) that, when given the key, turns around and bows. Later, a priest brings her a message from Gupta, apparently about a dream that he had. Immediately the princess retorts "मायूरी मदयति मार्जना मनांसि", and then, feeling shy, runs away. Now this line occurs in the first act of the Malavikagnimitram. Mother Kaushiki says this line when getting ready for the competition between the dance teachers. In both cases, the very air is full of the moisture of longing and the fragrance of romance. There is the sound of the beating of māyūrī drums keeping time with melodious music, jingling anklets and hearts full of yearning. In that one line of harmless-sounding reply, the princess indicates that she suspects Gupta to be Mayura, and that she is in love with him. An outsider would have just thought that she referred to the gift of the peacock.

The other heartwarming instance happens after the princess is married to Mayuravarma, who is a king by then. She is singing a line from the Meghadūta "इष्टे वस्तुन्युपचितरसाः प्रेमराशीभवन्ति". (My fervent opinion is that each verse from the Meghadūta is a nugget of sheer joy. Well, almost all of them. The beauty of these words, these sounds joined together in the beautiful Mandākrāntā meter is so great that so many times, I cease to think about the meaning and play the sounds in my head over and over again). Again, one can see the queen playing the veena with the king watching her with satisfaction on one side, and on another side there is the yakshi playing the veena, thinking of her husband.

Today is the age of pacifists. While warmongering is not good, it is basic human (even animal) nature to defend one's territory, and not to do so is to go against nature. Mayura probably had another interest in having a cordial relationship with the Pallavas, and so he resorted to bloodless war, even when he had a full-fledged army fighting for him. The warring sequences are simplistic but fantastic, and capture the imagination well. The simplicity and far-fetched-ness of the sieges are just afterthoughts. Such is the writing prowess of Devudu that when one is reading the book, one is sure that that was exactly how Mayura became the king. The plot is woven delicately and intricately, and makes it hard to put the book down once you pick it up.

Incidentally, this book was made into a movie starring Raj Kumar and Manjula. As it is with almost all movies based on books, the movie fails in a lot of things. It does inspire the viewer with patriotism but brings in unnecessary Kannada-Tamil controversy. But it is certainly a movie that can be watched once.

In my opinion, a good book can be differentiated from a not-so-good one by its ability to elevate and calm the mind. All of Devudu's books are just that - good. They leave the reader calm, peaceful and happy. Dear Reader, if you read Kannada but have not read Devudu so far, do find Mayura and read it. And do tell me about it!

********
*This post was written some time back.
** A note on Devudu: Devudu Narasimha Shastry is a well-known Kannada author. He has written other books like Mahakshatriya, Mahabrahmana and Mahadarshana. Mahakshatriya is the story of King Nahusha and Mahabrahmana is the story of how Kaushika became Vishwamitra. Mahadarshana is the story of Yajnavalkya. This last one can probably be called his magnum opus, because of its depth and the magnanimity of the subject itself. Recently, I also came to know that he translated each verse of the 'Yoga vAsishTha'

Tuesday, April 08, 2008

ಯುಗಾದಿಯ ಶುಭಾಶಯಗಳು

Most of the ideas here are cliched, but I could not resist this poem when I saw my little Biyadiya's face when he ate the bEvu-bella his Grandfather gave him.

ಹೊಸ ವರುಷದ ಹಬ್ಬದಂದು
ಪುಟ್ಟ ಚೆಂದದಿಂದ ಮಿಂದು
ತಂದೆಯಿತ್ತ ಬೇವು-ಬೆಲ್ಲ
"ಒಲ್ಲೆ" ಎಂದನು ||

"ನೈವೇದ್ಯದ ದ್ರಾಕ್ಷಿ ಮಧುರ
ಪಾಯಸವೋ ಮತ್ತು ಸಿಹಿಯು
ಬೆಲ್ಲವೊಂದು ಮೆಲ್ಲೆ ಸಾಕು
ಬೇವು ನನಗೆ ಬೇಡವು"

ಎಂಬ ಮಾತ ಕೇಳಿ ತಾಯಿ
ಮುದ್ದು ಮಗನ ಬಳಿಗೆ ಸಾರಿ
ಬುದ್ಧಿ ಪೇಳ್ವೆನೆಂದು ಬಗೆದು
ಪುಟ್ಟನಿಗಿಂತೆಂದಳು

"ಬೆಲ್ಲದ ಜೊತೆ ಬೇವನುಣುವ
ಅರ್ಥಪೂರ್ಣಸಂಪ್ರದಾಯ-
-ದರ್ಥವನ್ನು ತಿಳಿಯೊ ಮಗುವೆ
ಕೇಳು ನನ್ನ ಮಾತನು

ಬೇವಿನ ಕಹಿ ಬೆಲ್ಲದ ಸಿಹಿ
ಸೇರೆ ಮೈಗರೋಗತೆ
ನೋವಿನ ಕಹಿ ನಲಿವಿನ ಸಿಹಿ
ಸೇರೆ ನಮಗೆ ಪೂರ್ಣತೆ

ಸ್ವಾತಂತ್ರ್ಯದ ಸವಿಯ ಮುಂದೆ
ನಿಯಮ ಕಹಿಯೆನಿಸಿದರೂ
ಎರಡರ ಸಮತೋಲನವೇ
ರಕ್ಷೆ ನಮಗೆ ತಿಳಿ ಮಗು

ಬಿಸಿಲು ಬಹಳ ಹೆಚ್ಚಿದಾಗ
ಮಳೆಯು ಕೂಡ ಸುರಿವುದು
ಅಂತೆಯೆ ಸುಖ ಬೇಕೆಂಬಗೆ
ಕಷ್ಟವಂತು ತಪ್ಪದು

ಸ್ವಾನುಭವದ ಮೂಸೆಯಲ್ಲಿ
ಬೇವು-ಬೆಲ್ಲ ಕರಗಿಸೆ
ದೊರೆವುದೆಮ್ಮ ಮನಕೆ ಶಾಂತಿ
ಸಮಾಧಾನವೆಂದಿಗೂ"

ಮಗುವಿಗಮ್ಮನಂದ ಮಾತು
ನಮಗೆ ಕೂಡ ವಿಹಿತವು
ಬೇವು-ಬೆಲ್ಲ ಸೇರಿ ನಮ್ಮ
ಬದುಕಾಗಲಿ ಪೂರ್ಣವು ||

ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು !

Monday, March 17, 2008

ಶ್ರೇಯಸ್ಸು ಧೀಮಹಿಮೆ

ಇಂದು ಮಾರ್ಚ್ ೧೭ನೆಯ ತಾರೀಖು, ಕಳೆದ ಶತಮಾನದ ಒಬ್ಬ ಮಹಾದಾರ್ಶನಿಕ-ಕವಿ-ಋಷಿಯಾದ ಶ್ರೀ ಡಿ.ವಿ.ಗುಂಡಪ್ಪನವರ ಜನ್ಮದಿನ. ಡಿವಿಜಿ ಎಂದರೆ ನಮಗೆ ನೆನಪಿಗೆ ಬರುವುದು ಅದ್ಭುತವಾದ ಬರೆವಣಿಗೆ, ಆಳವಾದ ಒಳನೋಟ, ಪ್ರಾಮಾಣಿಕವಾದ ಮನಸ್ಸು, ಜೊತೆಗೆ ರಸವತ್ತಾದ ಮಾತು ಮತ್ತು ಹಾಸ್ಯ. 'ಬಾಳಿಗೊಂದು ನಂಬಿಕೆ', 'ದೇವರು', 'ಮಂಕುತಿಮ್ಮನ ಕಗ್ಗ', 'ಜ್ಞಾಪಕಚಿತ್ರಶಾಲೆ' ಮುಂತಾದ ಕೃತಿಗಳು ಜೀವನದಲ್ಲಿ ಪಾಲಿಸಬೇಕಾದ ಆದರ್ಶಗಳನ್ನು ಸೂಚಿಸುವುದರ ಜೊತೆಗೆ ಜೀವನದ ಸೌಂದರ್ಯವನ್ನೂ ಬಿಂಬಿಸುತ್ತವೆ. "ಆಹಾ, ಆ ಕಾಲ ಎಷ್ಟು ಚೆನ್ನಾಗಿತ್ತು, ಕಳೆದುಹೋಯಿತಲ್ಲ" ಎಂದು ಕೇವಲ ಪರಿತಪಿಸದೆ ಈ ಕಾಲದಲ್ಲಿಯೂ ಅಷ್ಟೇ ಆನಂದದಿಂದಿರಲು ಮಾರ್ಗವಿದೆಯೇ ಎಂಬ ವಿಚಾರದೆಡೆ ನಮ್ಮ ಯೋಚನೆ ಹರಿಯಲು ಪ್ರೇರಿಸುತ್ತವೆ ಇವರ ಕೃತಿಗಳು.

ಡಿವಿಜಿ ಅವರ 'ಮಂಕುತಿಮ್ಮನ ಕಗ್ಗ'ವಂತೂ ಅವರಿಗೆ 'ಆಧುನಿಕಗೀತಾಚಾರ್ಯ'ನೆಂಬ ಬಿರುದನ್ನೂ ತಂದು ಕೊಟ್ಟಿದೆ. ಕಗ್ಗವು ಜೀವನಕ್ಕೆ ಒಂದು manual ಇದ್ದಂತೆ. ಒಂದೊಂದು ಪದ್ಯದಲ್ಲಿಯೂ ಸ್ವಾರಸ್ಯಕರವಾದ, ವಿಚಾರಪ್ರಚೋದಕವಾದ ಮತ್ತು ಜೀವನಕ್ಕೆ ಉಪಯುಕ್ತವಾದಂಥ ವಿಷಯಗಳು ತುಂಬಿವೆ. ನನಗೆ ಬಹಳ ದಿನಗಳಿಂದ ಡಿವಿಜಿ ಅವರ ಬಗ್ಗೆ ಏನಾದರೂ ಬರೆದು, ಈ ದಿನ ಅದನ್ನು ಪೋಸ್ಟಿಸಬೇಕೆಂಬ ಆಸೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದ್ದರಿಂದ, ಕೆಲವು ವರ್ಷಗಳ ಹಿಂದೆ ಬರೆದ ಈ ಲೇಖನವನ್ನೇ, ಕೆಲವು ಬದಲಾವಣೆಗಳೊಂದಿಗೆ ನಿಮ್ಮ ಮುಂದಿಡುತ್ತಿದ್ದೇನೆ.

ಕಗ್ಗದ ಒಂದು ಪದ್ಯ ಹೀಗಿದೆ:

ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ
ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್
ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು
ಶ್ರೇಯಸ್ಸು ಧೀಮಹಿಮೆ ಮಂಕುತಿಮ್ಮ || ೫೪೬ ||

ಅರ್ಥ: ಆರ್ಯರು ಸಂಪತ್ತನ್ನು, ಬಲವನ್ನು ಅಥವಾ ಜಯವನ್ನು ಬೇಡಲಿಲ್ಲ; ಗಾಯತ್ರಿಯನ್ನೇ ಪರಮ ಮಂತ್ರವೆಂದು ತಿಳಿದು 'ಬುದ್ಧಿಯನ್ನು ಪ್ರಚೋದಿಸು' ಎಂದು ಅನುದಿನವೂ ಬೇಡಿದರು. ಬುದ್ಧಿಯ ಮಹಿಮೆ ಏನೆಂದರೆ ಅದು ಶ್ರೇಯಸ್ಸನ್ನು ತರುತ್ತದೆ.

ಈ ಪದ್ಯದಲ್ಲಿ ಡಿವಿಜಿಯವರು ಸಂಪತ್ತು, ಜಯಕ್ಕಿಂತ ಧೀ ಅಥವಾ ಬುದ್ಧಿ ಶ್ರೇಯಸ್ಕರ ಎಂದು ಹೇಳಿದ್ದಾರೆ. ಆರ್ಯರು ಎಂದರೆ ತಿಳಿದವರು. ನಮ್ಮಲ್ಲಿ ಸಂಪತ್ತನ್ನು ಗಳಿಸಲು, ಜಯವನ್ನು ಗಳಿಸಲು ಸಹ ಮಂತ್ರಗಳು ಇದ್ದರೂ ಇವೆಲ್ಲಕ್ಕಿಂತ ಶ್ರೇಷ್ಠವೆಂದು ತಿಳಿಯಲ್ಪಟ್ಟಿರುವ ಮಂತ್ರವೆಂದರೆ ಗಾಯತ್ರೀ ಮಂತ್ರ. ಎಲ್ಲರಿಗೂ ತಿಳಿದಂತೆ, ಗಾಯತ್ರೀ ಮಂತ್ರದ ನೇರ ಅರ್ಥ "ಎಲೈ ಸೂರ್ಯನೆ, ನಮ್ಮ ಬುದ್ಧಿಯನ್ನು ಪ್ರಚೋದಿಸು" ಎಂದು.

ಈ ಪದ್ಯದಲ್ಲಿ ಮುಖ್ಯವಾದ ಪದಗಳು ಧೀ, ಪ್ರಚೋದಿಸು, ಮತ್ತು ಶ್ರೇಯಸ್ಸು. ಮೂರರ ಬಿಡಿ-ಬಿಡಿ ಅರ್ಥಗಳನ್ನು ವಿಚಾರಿಸಿ ನಂತರ ಒಟ್ಟು ಅರ್ಥವನ್ನು ತಿಳಿಯಲು ಪ್ರಯತ್ನ ಪಡೋಣ.

ಮೊದಲಿಗೆ ಶ್ರೇಯಸ್ಸು ಎಂದರೆ ಏನು ಎನ್ನುವುದನ್ನು ನೋಡೋಣ. ಶ್ರೇಯಸ್ಸನ್ನು ಅರ್ಥ ಮಾಡಿಕೊಳ್ಳುವುದರ ಜೊತೆ ಪ್ರೇಯಸ್ಸನ್ನೂ ನಾವು ತಿಳಿಯಬೇಕು. ಕಠೋಪನಿಷತ್ತಿನಲ್ಲಿ ಒಂದು ಮಂತ್ರದ ಭಾಗ ಹೀಗಿದೆ.

ಅನ್ಯಚ್ಛ್ರೇಯೋನದುತೇವ ಪ್ರೇಯಃ
ಉಭೇ ತೇ ನಾನಾರ್ಥೇ ಪುರುಷಂ ಸಿನೀತಃ |
ತಯೋಃ ಶ್ರೇಯ ಆದದಾನಸ್ಯ ಸಾಧು
ಭವತಿ ಹೀಯತೇ ಅರ್ಥಾತ್ ಯ ಉ ಪ್ರೇಯೋ ವೃಣೀತೇ ||

ತಮ್ಮನ್ನು ಅಂಗೀಕರಿಸಲೆಂದು ಹತ್ತಿರ ಬಂದ ಶ್ರೇಯೋ-ಪ್ರೇಯಗಳಲ್ಲಿ ಶ್ರೇಯಸ್ಸನ್ನು ಅಂಗೀಕರಿಸಿದವನಿಗೆ 'ಸಾಧು' ಅಥವಾ ಒಳ್ಳೆಯದಾಗುತ್ತದೆ. ಪ್ರೇಯಸ್ಸನ್ನು ಅಂಗೀಕರಿಸಿದವನು ಗುರಿ ತಪ್ಪುತ್ತಾನೆ ಎಂದು ಇದರರ್ಥ. ಶ್ರೇಯಸ್ಸು ಎಂದರೆ ಶುಭ, ಮಂಗಳ ಮತ್ತು ಏಳಿಗೆ. ಗುರಿ ತಪ್ಪಿಸುವುದು ಪ್ರೇಯಸ್ಸು. ಇಲ್ಲಿ ಏಳಿಗೆಯನ್ನು ಉಂಟುಮಾಡುವುದು ಏನು ಎಂಬುದನ್ನು ವಿಚಾರಿಸುವುದು ಮನುಷ್ಯನಿಗೇ ಬಿಟ್ಟಿದ್ದು. ರಾಮನಿಗೂ ರಾವಣನಿಗೂ ಒಂದೇ ಮಾರ್ಗ ರುಚಿಸುವುದಿಲ್ಲ, ಸರಿ ಹೊಂದುವುದೂ ಇಲ್ಲ, ಅಲ್ಲವೇ?

ನಮ್ಮ ಮುಂದಿನ ಪದ ಧೀಃ ಎಂಬುದು. ಧೀ ಎಂದರೆ ಬುದ್ಧಿ. ಒಳ್ಳೆಯದರಿಂದ ಕೆಟ್ಟದ್ದನ್ನು ಬೇರ್ಪಡಿಸುವ ಶಕ್ತಿ. ವೇದಗಳಲ್ಲಿ ವಾಗ್ದೇವಿ ಅಥವಾ ಸರಸ್ವತಿಯನ್ನು ಯನ್ನು "ಧೀನಾಮವಿತ್ರೀ" ಎಂದು ಸ್ತುತಿಸಿದ್ದಾರೆ. ಎಂದರೆ 'ಬುದ್ಧಿಯನ್ನು ರಕ್ಷಿಸುವವಳು', ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ 'ಬುದ್ಧಿಯು ನಾಶವಾಗದಂತೆ ಅನುಗ್ರಹಿಸುವವಳು' ಎಂದು. ಹಾಗೆಯೇ ಲಲಿತಾಷ್ಟೋತ್ತರದಲ್ಲಿ ತಾಯಿಯನ್ನು 'ಸರ್ವೋಪಲಬ್ಧಿಹೇತುಶ್ಚ ಬುದ್ಧಿನಿಶ್ಚಯರೂಪಿಣೇ' ಎಂದು ವರ್ಣಿಸಿದ್ದಾರೆ. ಬುದ್ಧಿಯು 'ಸರ್ವೋಪಲಬ್ಧಿಹೇತು'- ಎಲ್ಲವನ್ನೂ ಪಡೆಯಲು ಕಾರಣವಾಗುವುದು. ಇದರ ಅರ್ಥ ಬುದ್ಧಿರೂಪಳಾಗಿದ್ದು, ಎಲ್ಲವನ್ನೂ ಪಡೆಯುವುದಕ್ಕೆ ಕಾರಣಳಾಗಿರುವವಳು ಎಂದು. ಕೇವಲ ಬುದ್ಧಿಯಿಂದಲೇ ನಾವು ಐಹಿಕ, ಆಮುಷ್ಮಿಕ ಫಲಗಳನ್ನು ಪಡೆಯಲು ಸಾಧ್ಯ. ಒಂದು ಸೋಜಿಗದ ಸಂಗತಿ ಇಲ್ಲಿ ಕಾಣಿಸುತ್ತದೆ. ಅದು ಏನೆಂದರೆ ಬುದ್ಧಿಪೂರ್ವಕವಾಗಿ ನಾವು ಮಾಡಿದ ಕೆಲಸಗಳಿಂದ ನಮಗೆ ಶ್ರೇಯಸ್ಸೇ ಆಗುವುದು. ಇದು ನಿತ್ಯಸತ್ಯ. ಭಗವದ್ಗೀತೆಯಲ್ಲಿ ದೇಹವೆಂಬ ರಥಕ್ಕೆ ಬುದ್ಧಿಯೇ ಸಾರಥಿ ಎಂದು ಹೇಳಿದೆ. ಎಂದರೆ ಬುದ್ಧಿಯ ಸಾಹಾಯ್ಯದಿಂದಲೇ ನಮ್ಮ ಕೆಲಸಗಳೆಲ್ಲ ಆಗುವುದು. ಬುದ್ಧಿ ಕೈಕೊಟ್ಟರೆ ಅದರ ದುಷ್ಪರಿಣಾಮಗಳು ಅನೇಕ.

ಮೊನ್ನೆ ಒಂದು ಉಪನ್ಯಾಸದಲ್ಲಿ ಶ್ರೀ ತೇಜೋಮಯಾನಂದರು ಒಂದು ಕಥೆಯನ್ನು ಹೇಳಿದರು. ಒಬ್ಬ ಮನುಷ್ಯ ಇದ್ದನಂತೆ, ವಿಪರೀತ ಮುಂಗೋಪಿ. ಅವನು ಸ್ನೇಹಿತನಿಗೆ ಹೇಳಿದನಂತೆ "ನೋಡಯ್ಯ, ನನಗೆ ಕೋಪ ಬಂದರೆ ಯೋಚನಾಶಕ್ತಿಯೇ ಹೊರಟುಹೋಗುತ್ತದೆ" ಎಂದು. ಅದಕ್ಕೆ ಸ್ನೇಹಿತ ಉತ್ತರಿಸಿದನಂತೆ "ಇಲ್ಲವಯ್ಯ, ನೀನು ಯೋಚನೆ ಮಾಡದಿದ್ದಾಗಲೇ ನಿನಗೆ ಕೋಪ ಬರುವುದು" ಎಂದು! ಇದರಿಂದ ಏನನ್ನು ಕಲಿಯಬಹುದು ಎಂದು ಯೋಚಿಸೋಣ. ಬುದ್ಧಿ ಒಂದು ಕ್ಷಣ ಕೈ ಕೊಟ್ಟರೂ ಅದರಿಂದ ಆಗುವ ನಷ್ಟ ಹೆಚ್ಚು. ಬುದ್ಧಿ "ಬೇಡ" ಎಂದಿದ್ದನ್ನು ಮನಸ್ಸು, ದೇಹಗಳು ಮಾಡಿದರೆ ಅಥವಾ ಬುದ್ಧಿ "ಮಾಡು" ಎಂದಿದ್ದನ್ನು ದೇಹಮನಸ್ಸುಗಳು ಮಾಡದಿದ್ದರೆ ಅನುಶಯಪೂರಿತವಾದ ಹಿನ್ನೋಟ ತಪ್ಪದು! ಆದ್ದರಿಂದ ಯಾವಾಗಲೂ, ಎಲ್ಲ ಕಡೆ ಬುದ್ಧಿಗೇ ಹೆಚ್ಚು ಪ್ರಾಶಸ್ತ್ಯ.

ಇನ್ನು ಉಳಿದ ಪದ "ಪ್ರಚೋದಿಸು" ಎಂಬುದು. ಬುದ್ಧಿ ಎನ್ನುವುದು ಕ್ರಯಕ್ಕೆ ಸಿಕ್ಕುವ ಅಥವಾ ಬೇಡಿದರೆ ಸಿಗುವ ಸಾಮಗ್ರಿಯಲ್ಲ. ಹಣ ಕೊಟ್ಟು ಪುಸ್ತಕವನ್ನು ಕೊಳ್ಳಬಹುದು, ಆದರೆ ಅದರಿಂದ ಏನನ್ನು ಕಲಿಯುತ್ತೇವೆ, ಹೇಗೆ ಕಲಿಯುತ್ತೇವೆ ಎಂಬುದು ಸಂಪೂರ್ಣವಾಗಿ ನಮ್ಮನ್ನು ಅವಲಂಬಿಸಿದ್ದು. ಎಯ್ನ್ ರ್‍ಯಾಂಡ್ ನ ಪುಸ್ತಕಗಳನ್ನು ಓದಿ ಕಮ್ಯೂನಿಸ್ಟ್ ಆದವರೂ ಇರಬಹುದು, ಕಾರ್ಲ್ ಮಾರ್ಕ್ಸ್ ಅನ್ನು ಓದಿ ಕ್ಯಾಪಿಟಲಿಸ್ಟ್ ಆದವರೂ ಇರಬಹುದು! ಬುದ್ಧಿಯನ್ನು ದೇವರೂ ಸಹ ನಮಗೆ 'ಕೊಡಲು' ಸಾಧ್ಯವಿಲ್ಲ; ಕೇವಲ ಪ್ರಚೋದಿಸಬಹುದು, ಅಷ್ಟೆ. ನಮ್ಮ ಸುತ್ತಮುತ್ತಲಿನ ವಿಷಯಗಳು ಮತ್ತು ಓದುವ ವಿಚಾರಗಳು ನಮ್ಮ ಬುದ್ಧಿಯನ್ನು ಒಳ್ಳೆಯದಕ್ಕಾಗಲಿ, ಕೆಟ್ಟದಕ್ಕಾಗಲಿ ಕೇವಲ ಪ್ರಚೋದಿಸುತ್ತವೆ. ಅದರಿಂದಲೇ ಡಿವಿಜಿಯವರು ಇಲ್ಲಿ "ಪ್ರಚೋದಿಸು" ಎಂದು ಹೇಳಿದ್ದಾರೆ.

ಈ ಪದ್ಯದ ಒಟ್ಟು ಅರ್ಥವನ್ನು ಈಗ ವಿಚಾರಿಸೋಣ. ಕಠೋಪನಿಷತ್ತಿನಲ್ಲಿಯೇ ಮುಂದಿನ ಮಂತ್ರದಲ್ಲಿ "ಶ್ರೇಯೋ ಹಿ ಧೀರೋಽಭಿ ಪ್ರೇಯಸೋ ವೃಣೀತೇ" ಎಂದು ಹೇಳಿದೆ. ಎಂದರೆ, ಧೀರ ಅಥವಾ ಬುದ್ಧಿವಂತನು ಪ್ರೇಯಸ್ಸು, ಶ್ರೇಯಸ್ಸುಗಳಲ್ಲಿ ಶ್ರೇಯಸ್ಸನ್ನು ಆರಿಸಿಕೊಳ್ಳುತ್ತಾನೆ ಎಂದು. ಸೂಕ್ಷ್ಮವಾಗಿ ನೋಡಿದರೆ, ಈ ಪದ್ಯದಲ್ಲಿ ಡಿವಿಜಿಯವರು ಹೇಳಿರುವುದೂ ಅದನ್ನೇ. ಬುದ್ಧಿಯಿಂದ ಅಥವಾ ಬುದ್ಧಿಯ ಅನುಮತಿಯಿಂದ ಸಂಪಾದಿಸಿರುವುದೆಲ್ಲವೂ ಶ್ರೇಯಸ್ಕರ. ಆದ್ದರಿಂದ ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿಯೂ ನಾವು ವಿಚಾರ ಮಾಡಿ, ನಮಗೆ ಒಳ್ಳೆಯದನ್ನು ಉಂಟುಮಾಡುವುದನ್ನೇ ಆರಿಸಬೇಕು.

ಕಗ್ಗದ ಒಂದೊಂದು ಪದ್ಯಕ್ಕೂ ಅರ್ಥವ್ಯಾಪ್ತಿ ಅಧಿಕ. ಇಂಥ ಕೃತಿಯನ್ನು ನಮಗೆ ಕೊಟ್ಟ ರಸಋಷಿಗೆ ನಮೋ ನಮಃ.

Thursday, December 06, 2007

ಕಾಳಿದಾಸ - ೨

ಹಿಂದಿನ ಕಂತಿನಲ್ಲಿ ಹೇಳಿದಂತೆ ಕಾಳಿದಾಸ ಧರ್ಮದ ಸ್ವರೂಪವನ್ನು, ಅದರ ವಿವಿಧ ಆಯಾಮಗಳನ್ನು ತನ್ನ ಕಾವ್ಯಗಳಲ್ಲಿ ಕೆಲವೆಡೆ ಪ್ರಕಟವಾಗಿ, ಕೆಲವೆಡೆ ಸೂಕ್ಷ್ಮವಾಗಿ ಚಿತ್ರಿಸಿದ್ದಾನೆ. ಧರ್ಮವಿರುದ್ಧವಾಗಿ ನಡೆದುಕೊಳ್ಳುವ ಪಾತ್ರಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಮೆ. ಇದು ಸ್ವಲ್ಪ ಅಸಹಜ ಎಂದೆನ್ನಿಸಿದರೂ ಮನಸ್ಸಿಗೆ ಬಹಳ ಹಿತವನ್ನು ಕೊಡುವಂತಹ ವಿಷಯ.

ಶಕುಂತಲೆಯನ್ನು ದುಷ್ಯಂತ ಮೊದಲ ಬಾರಿ ನೋಡಿದಾಗಲೇ ಅವಳ ಬಗ್ಗೆ ಮೋಹವುಂಟಾಗುತ್ತದೆ. ಆದರೆ ಅವಳು ಮುನಿಕನ್ಯೆ, ಪರಿಗ್ರಹಕ್ಕೆ ಯೋಗ್ಯಳೋ ಅಲ್ಲವೋ ಎಂದು ಅವನಿಗೆ ಸಂದೇಹವುಂಟಾದರೂ,
'ಅಸಂಶಯಂ ಕ್ಷತ್ರಪರಿಗ್ರಹಕ್ಷಮಾ ಯದಾರ್ಯಮಸ್ಯಾಮ್ ಅಭಿಲಾಷಿ ಮೇ ಮನಃ' (ಈಕೆ ನಿಸ್ಸಂಶಯವಾಗಿ ಕ್ಷತ್ರಿಯನನ್ನು ಮದುವೆ ಮಾಡಿಕೊಳ್ಳಲು ಯೋಗ್ಯಳು. ಏಕೆಂದರೆ ಧರ್ಮಪರವಾದ ನನ್ನ ಮನಸ್ಸು ಇವಳಲ್ಲಿ ಆಸಕ್ತವಾಗಿದೆ)
ಎಂದುಕೊಳ್ಳುತ್ತಾನೆ. ನಂತರ ಅನಸೂಯೆ-ಪ್ರಿಯಂವದೆಯರನ್ನು ಶಕುಂತಲೆಯ ವೃತ್ತಾಂತದ ಬಗ್ಗೆ ವಿಚಾರಿಸಿಯೇ ಮುಂದಿನ ಹೆಜ್ಜೆಯನ್ನಿಡುತ್ತಾನೆ (ಇದಕ್ಕೆ ಕಾರಣಗಳು ಎರಡು.
೧. ಹಿಂದಿನ ಕಾಲದಲ್ಲಿ ವಿರಕ್ತರಾದ, ಯೋಗ್ಯಕನ್ಯೆಯರು ಮದುವೆಯಾಗದೆ ಬ್ರಹ್ಮವಾದಿನಿಯರಾಗುವ ಸಂಪ್ರದಾಯವಿತ್ತು. ಶಕುಂತಲೆ ಬ್ರಹ್ಮವಾದಿನಿಯಲ್ಲವೆಂದು ತಿಳಿದುಕೊಳ್ಳುವುದು ಒಂದು ಅಂಶ.
೨. ಕ್ಷತ್ರಿಯರು ಬ್ರಾಹ್ಮಣಕನ್ಯೆಯರನ್ನು ಮದುವೆಯಾದರೆ ಅದು ಪ್ರತಿಲೋಮವಿವಾಹ. ಅವರ ಸಂತಾನ ಕ್ಷತ್ರಿಯರಾಗುವುದಿಲ್ಲ, ಬದಲಾಗಿ ಸೂತರಾಗುತ್ತಾರೆ. ಶಕುಂತಲೆ ಕ್ಷತ್ರಿಯನಾದ ಕೌಶಿಕ ಮತ್ತು ಅಪ್ಸರೆಯಾದ ಮೇನಕೆಯಿಂದ ಹುಟ್ಟಿದುದರಿಂದ ಅವಳು ಕ್ಷತ್ರಿಯನನ್ನು ಮದುವೆಯಾಗಲು ಯೋಗ್ಯಳು).

ಸನಾತನಧರ್ಮದ ಅನೇಕ ಆಯಾಮಗಳಲ್ಲಿ ಆಶ್ರಮವ್ಯವಸ್ಥೆಯೂ ಒಂದು. ಹೇಗೆ ಮನುಷ್ಯ ಶೈಶವ-ಯೌವನ-ವಾರ್ಧಕ್ಯಗಳನ್ನು ಹೊಂದುತ್ತಾನೆಯೋ ಅಷ್ಟೇ ಸಹಜವಾದ ರೀತಿಯಲ್ಲಿ ಬ್ರಹ್ಮಚರ್ಯ-ಗಾರ್ಹಸ್ಥ್ಯ-ವಾನಪ್ರಸ್ಥ ಎಂಬ ಆಶ್ರಮಗಳು ನಿಯತವಾಗಿವೆ.

ರಘುವಂಶದ ಆರಂಭದಲ್ಲಿ ರಘುವಂಶದವರ ಸದ್ಗುಣಗಳನ್ನು ಬಣ್ಣಿಸುವ ಒಂದು ಕುಲಕದಲ್ಲಿ ಹೀಗೆ ಹೇಳುತ್ತಾನೆ.
ಶೈಶವೇSಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಂ |
ವಾರ್ಧಕ್ಯೇ ಮುನಿವೃತ್ತೀನಾಂ ಯೋಗೇನಾಂತೇ ತನುತ್ಯಜಾಮ್ ||
'ಶೈಶವದಲ್ಲಿ ವಿದ್ಯೆಯನ್ನು ಅಭ್ಯಸಿಸಿ, ಯೌವನದಲ್ಲಿ ವಿಷಯಗಳನ್ನು ಇಚ್ಛಿಸಿ, ವಾರ್ಧಕ್ಯದಲ್ಲಿ ಮುನಿವೃತ್ತಿಯನ್ನು ಕೈಗೊಂಡು, ಅಂತ್ಯದಲ್ಲಿ ಯೋಗದಿಂದ ಶರೀರವನ್ನು ತ್ಯಜಿಸುವವರ (ವಂಶವನ್ನು ಕುರಿತು ವರ್ಣಿಸುತ್ತೇನೆ).

ಮೇಲಿನದು ನಮ್ಮ ಮುಂದಿರುವ ಆದರ್ಶ. ಶೈಶವದಲ್ಲಿ ವಿದ್ಯಾರ್ಜನೆ ಮಾಡದಿದ್ದರೆ ಎಷ್ಟು ತಪ್ಪೋ, ಯೌವನದಲ್ಲಿ ಗೃಹಸ್ಥರಾಗದಿರುವುದೂ ಅಷ್ಟೇ ತಪ್ಪು. ಇನ್ನು ವಾನಪ್ರಸ್ಥದ ಬಗ್ಗೆ ಹೇಳುವುದಾದರೆ ಈಗಿನ ಕಾಲದಲ್ಲಿಯೂ ಅದೊಂದು ಆವಶ್ಯಕವಾದ, ಮುಖ್ಯವಾದ ಆಶ್ರಮ. ವನಗಳಲ್ಲಿ ಹೋಗಿ ವಾಸ ಮಾಡುವುದು ಈಗ ಸಾಧ್ಯವಿಲ್ಲದಿದ್ದರೂ ವಯಸ್ಸಾದಾಗ ಶಾಂತಚಿತ್ತರಾಗಿ ತತ್ತ್ವಜಿಜ್ಞಾಸೆಯನ್ನು ಮೈಗೂಡಿಸಿಕೊಳ್ಳುವುದು ಆರೋಗ್ಯದೃಷ್ಟ್ಯಾ ಹಿತಕರ, ಸಾಮಾಜಿಕದೃಷ್ಟ್ಯಾ ಶ್ರೇಯಸ್ಕರ.

ವರತಂತುವಿನ ಶಿಷ್ಯನಾದ ಕೌತ್ಸ ರಘುಮಹಾರಾಜನ ಹತ್ತಿರ ಗುರುದಕ್ಷಿಣೆಯನ್ನು ಬೇಡಲು ಬಂದಾಗ ರಘುವು ಅವನನ್ನು ಕುಶಲ ವಿಚಾರಿಸುವಾಗ ಹೀಗೆ ಕೇಳುತ್ತಾನೆ.
ಅಪಿ ಪ್ರಸನ್ನೇನ ಮಹರ್ಷಿಣಾ ತ್ವಂ ಸಮ್ಯಗ್ವಿನೀಯಾನುಮತೋ ಗೃಹಾಯ |
ಕಾಲೋ ಹ್ಯಯಂ ಸಂಕ್ರಮಿತುಂ ದ್ವಿತೀಯಂ ಸರ್ವೋಪಕಾರಕ್ಷಮಮಾಶ್ರಮಂ ತೇ||
(ನಿನ್ನ ವಿದ್ಯಾರ್ಜನೆಯಿಂದ) ಪ್ರಸನ್ನನಾದ ಮಹರ್ಷಿಯಿಂದ ಮದುವೆಯಾಗಲು ಅನುಮತಿಯನ್ನು ಪಡೆದಿರುವೆ ತಾನೆ? ಎಲ್ಲರ ಉಪಕಾರವನ್ನು ಮಾಡಲು ಸಾಧ್ಯವಾಗುವ ಎರಡನೆಯ ಆಶ್ರಮವನ್ನು ಕ್ರಮಿಸಲು ಇದೇ ನಿನಗೆ ಸಕಾಲ!

ಮೇಲಿನ ಶ್ಲೋಕದಲ್ಲಿ ಎರಡು ಅಂಶಗಳು ಮನನೀಯ. ಒಂದು - ಗೃಹಸ್ಥಾಶ್ರಮವನ್ನು 'ಸರ್ವೋಪಕಾರಕ್ಷಮ' ಎಂದು ವರ್ಣಿಸಿರುವುದು. ಗೃಹಸ್ಥರು ಕೇವಲ ತಮ್ಮ ಕುಟುಂಬದ ಸೌಖ್ಯವನ್ನು ಗಮನಿಸಿದರೆ ಸಾಲದು. ಬೇರೆಯ ಆಶ್ರಮದವರ ಪಾಲನ ಗೃಹಸ್ಥನ ಮುಖ್ಯಕರ್ತವ್ಯಗಳಲ್ಲಿ ಒಂದು.
ಹಾಗೆಯೇ, ಇಲ್ಲಿ ತುಂಬ ಮಾರ್ಮಿಕವಾದ ಪದ 'ಸಂಕ್ರಮಿತುಂ'. ಚೆನ್ನಾಗಿ ಕ್ರಮಿಸುವುದು ಎಂದು ಈ ಪದದ ಅರ್ಥ. ಇಲ್ಲಿಯ ಧ್ವನಿಯೇನೆಂದರೆ, ಈ ಆಶ್ರಮ ಕೇವಲ ಒಂದು ಮಾರ್ಗ, ಇಲ್ಲಿ ನೆಲೆ ನಿಲ್ಲಲಾಗದು ಎಂದು. ಗೃಹಸ್ಥಾಶ್ರಮವನ್ನು ಚೆನ್ನಾಗಿ ಕ್ರಮಿಸಿದರೆ ಅದೇ ವಾನಪ್ರಸ್ಥಕ್ಕೆ ದಾರಿಯಾಗುತ್ತದೆ.

ಹಾಗೆಯೇ, ಶಕುಂತಲೆ ಪತಿಗೃಹಕ್ಕೆ ತೆರಳುವಾಗ ತಂದೆಯನ್ನು ಬಿಟ್ಟು ಹೋಗಲಾಗದೆ ದುಃಖಿಸುತ್ತಿದ್ದಾಗ ಕಣ್ವ ಹೇಳುವುದು ಇದು
ಭೂತ್ವಾ ಚಿರಾಯ ಚತುರಂತಮಹೀಸಪತ್ನೀ ದೌಷ್ಯಂತಮಪ್ರತಿರಥಂ ತನಯಂ ನಿವೇಶ್ಯ |
ಭರ್ತ್ರಾ ತದರ್ಪಿತಕುಟುಂಬಭರೇಣ ಸಾರ್ಧಂ ಶಾಂತೇ ಕರಿಷ್ಯಸಿ ಪದಂ ಪುನರಾಶ್ರಮೇSಸ್ಮಿನ್ ||
ಬಹಳಕಾಲ ಭೂಮಿಯ ಸವತಿಯಾಗಿ (ಎಂದರೆ ರಾಜ್ಞಿಯಾಗಿ), ಎದುರಿಲ್ಲದ ದೌಷ್ಯಂತ (ದುಷ್ಯಂತನ ಮಗ)ನಿಗೆ ಕುಟುಂಬದ ಭಾರವನ್ನು ಅರ್ಪಿಸಿ, ಗಂಡನ ಜೊತೆಯಲ್ಲಿ ಮತ್ತೆ ಈ ಶಾಂತವಾದ ಆಶ್ರಮಕ್ಕೇ ಬರುತ್ತೀಯೆ.

ಕೇವಲ ಒಂದೇ ಶ್ಲೋಕದಲ್ಲಿ ಕಣ್ವರು ಶಕುಂತಲೆಗೆ ಅವಳ ಈಗಿನ ಕರ್ತವ್ಯವನ್ನೂ, ಮುಂದಿನ ಕರ್ತವ್ಯವನ್ನೂ ಎಷ್ಟು ಚೆನ್ನಾಗಿ ಹೇಳಿದ್ದಾರಲ್ಲವೆ?

ಇನ್ನು ಆಶ್ರಮವ್ಯವಸ್ಥೆಯ ಬಗ್ಗೆ ಎರಡು ಮಾತು. ಬ್ರಹ್ಮಚರ್ಯ ವಿದ್ಯಾರ್ಜನೆಗೆ ಮೀಸಲಾದುದು. ವಿದ್ಯಾರ್ಜನೆಗೆ ತೊಂದರೆಯುಂಟುಮಾಡುವ, ಭೋಗಾಸಕ್ತಿಯನ್ನುಂಟುಮಾಡುವ ಎಲ್ಲ ವಿಷಯಗಳೂ ವಸ್ತುಗಳೂ (ಸುಗಂಧ, ತಾಂಬೂಲ ಇತ್ಯಾದಿ) ಬ್ರಹ್ಮಚಾರಿಗಳಿಗೆ ನಿಷಿದ್ಧ. ಹಾಗೆಯೇ ಗಾರ್ಹಸ್ಥ್ಯದಲ್ಲಿ ವಿಷಯಸುಖಗಳ ಅನುಭವದ ಜೊತೆಯಲ್ಲಿ ಅತಿಥಿಸತ್ಕಾರ, ನಿತ್ಯಾಗ್ನಿಹೋತ್ರ ಮುಂತಾದ ಕೆಲಸಗಳಿಗೆ ಪ್ರಾಶಸ್ತ್ಯ. ಅನಂತರ ಮಕ್ಕಳು ದೊಡ್ಡವರಾದ ಮೇಲೆ ಸಂಸಾರದ ಭಾರವನ್ನು ಅವರಿಗೊಪ್ಪಿಸಿ ಆತ್ಮಚಿಂತನೆಯಲ್ಲಿ ಕಾಲ ಕಳೆಯುವ ವಾನಪ್ರಸ್ಥಾಶ್ರಮ.

ವರ್ಣಸಂಕರಕ್ಕಿಂತ ಆಶ್ರಮಸಂಕರ ಮನುಷ್ಯನ ಮೇಲೆ ಮತ್ತು ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆಯೆಂದು ನನ್ನ ಭಾವನೆ. ಸಂಕರವೆಂದರೆ ಒಂದು ಆಶ್ರಮದವರು ಮತ್ತೊಂದು ಆಶ್ರಮದವರ ಚಟುವಟಿಕೆಗಳನ್ನು ತಮ್ಮದಾಗಿಸಿಕೊಳ್ಳುವುದು. ಇಂದು ಹೈಸ್ಕೂಲಿನಲ್ಲಿಯೇ ಮಕ್ಕಳು ವಿಚಿತ್ರಪ್ರಲೋಭನೆಗಳಿಗೆ ಒಳಗಾಗಿ, ಅವರ ವಿದ್ಯಾರ್ಜನೆ ಸಮಾಧಾನಕರವಾಗಿ ಇರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಶಿಸ್ತು-ಸಂಯಮಗಳನ್ನು ಕಲಿಯದ, ಬೌದ್ಧಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಸಬಲರಾಗುವ ದಾರಿಯನ್ನು ತಿಳಿಯದ ಮಕ್ಕಳು ಬೆಳೆದು ಹೇಗೆ ಒಳ್ಳೆಯ ಗೃಹಸ್ಥರಾಗಬಲ್ಲರು? ಹಾಗೆಯೇ, ತೃಪ್ತಿಯಿಲ್ಲದ ಗೃಹಸ್ಥಜೀವನವನ್ನು ಕಳೆದವರಿಗೆ ನೆಮ್ಮದಿಯ ವಾನಪ್ರಸ್ಥಾಶ್ರಮ ಪಲಾಯನದಂತೆಯೇ ಕಾಣುತ್ತದೆಯಲ್ಲವೇ? ತಮ್ಮ ಮೇರುಕೃತಿಯಾದ 'ಮಹಾದರ್ಶನ'ದಲ್ಲಿ ದೇವುಡು ರವರು ಒಂದು ಸುಂದರವಾದ ಮಾತನ್ನು ಹೇಳುತ್ತಾರೆ -'ವೈರಾಗ್ಯವೆಂದರೆ ಬೇಡವೆಂದು ನೂಕುವುದಲ್ಲ, ಸಾಕೆಂದು ವಿಮುಖವಾಗುವುದು' ಎಂದು. ವಾರ್ಧಕ್ಯದಲ್ಲಿ ಈ ತೃಪ್ತಿಸಮಾಧಾನಗಳು ಬರಬೇಕಾದರೆ ಒಳ್ಳೆಯ ಶೈಶವ-ಯೌವನಗಳು ಆವಶ್ಯಕ. ಹಾಗಾಗಿ, ಒಬ್ಬ ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಜೀವನ ಚೆನ್ನಾಗಿರಬೇಕಾದರೆ ಆಶ್ರಮವ್ಯವಸ್ಥೆಯನ್ನು ಯಥಾಶಕ್ತಿ, ಯಥಾಸ್ಥಿತಿ ಕಾಪಾಡಿಕೊಳ್ಳುವುದು ಆವಶ್ಯಕ.

|| ಇತಿ ಶಮ್||

Wednesday, August 29, 2007

ಕೆಟ್ಟ, ಕೆಡುತ್ತಿರುವ ಕನ್ನಡ

ಇತ್ತೀಚೆಗೆ ಮಿತ್ರರೊಬ್ಬರು ನನ್ನನ್ನು ಕೇಳಿದರು "ಏನ್ರಿ, 'ಸಾಫ್ಟ್‌ವೇರ್' ಗೆ ಕನ್ನಡದಲ್ಲಿ ಏನು ಹೇಳ್ತಾರೆ?" ಎಂದು. ನಾನು "ತಂತ್ರಾಂಶ" ಎಂದು ಉತ್ತರಿಸಿದೆ. ಅವರು ಎರಡು ಕ್ಷಣ ಯೋಚಿಸಿ "'ಅಭಿಯಂತ' ಎಂದರೆ ಇಂಜಿನಿಯರ್ ಅಲ್ಲವೇನ್ರಿ?" ಎಂದು ಕೇಳಿದರು. ಹೌದೆಂದೆ. ಆಗ ಅವರು "ಹಾಗಿದ್ದರೆ ನನ್ನ ವೃತ್ತಿಯನ್ನು 'ತಂತ್ರಾಂಶ-ಅಭಿಯಂತ' ಎಂದು ನಮೂದಿಸಬಹುದೆ?" ಎಂದು ಕೇಳಿದರು. ನಾನು ಅವಾಕ್ಕಾದೆ.

ಕನ್ನಡಭಾಷೆ ಬಹಳ ಸೊಗಸಾದ, ಮುದ್ದಾದ ಭಾಷೆ. ಆದರೆ ಇತ್ತೀಚೆಗೆ ಕೇಳಿಬರುತ್ತಿರುವ ಕನ್ನಡದಲ್ಲಿ ಸೊಗಸು ಕಾಣಿಸುತ್ತಿಲ್ಲ. ವಾರ್ತಾಪತ್ರಿಕೆಗಳಲ್ಲಾಗಲಿ, ದೂರದರ್ಶನದಲ್ಲಾಗಲಿ ಕಾಣ/ಕೇಳಿಬರುವ ಕನ್ನಡ ಬಹಳ ಸಲ ಸಹನಶೀಲೆಯಾದ ಕನ್ನಡ-ತಾಯಿಗೇ ಅಳು ಬರಿಸುವಂತಿರುತ್ತದೆ.

ಸಂಸ್ಕೃತ ಮತ್ತು ಕನ್ನಡಪದಗಳನ್ನು ಸೇರಿಸಿ ಮಾಡುವ ಸಮಾಸ ಅರಿಸಮಾಸ. ಕುಮಾರವ್ಯಾಸನ ಭಾರತದಲ್ಲಿ ಅಲ್ಲಲ್ಲಿ ಅರಿಸಮಾಸಗಳ ಪ್ರಯೋಗವಿದೆ ಎಂದು ಕೇಳಿದ್ದೇನೆ. ಪ್ರತಿದಿನ ಬೆಳಗಿನ ಪತ್ರಿಕೆಯನ್ನು ತೆಗೆದು ಎರಡು ನಿಮಿಷ ಓದಿದರೆ ಹೊಸ ಹೊಸ ಅರಿಸಮಾಸಗಳು ಕಣ್ಣಿಗೆ ರಾಚುತ್ತವೆ. ಕುಮಾರವ್ಯಾಸ ಅರಿಸಮಾಸಗಳನ್ನು ಮಾಡಿದ ಎಂಬುದನ್ನೇ ಪ್ರಮಾಣವಾಗಿಟ್ಟುಕೊಂಡು ಸಿಕ್ಕ ಸಿಕ್ಕ ಪದಗಳೆಲ್ಲಕ್ಕೂ ಸಮಾಸ ಮಾಡಲು ಹೊರಟರೆ ಸರಿಯೇ? 'ಸದ್ಬಳಕೆ', 'ಸಂಪರ್ಕ-ಕೊಂಡಿ' - ಒಂದೇ ಎರಡೇ? ಇವು ವ್ಯಾಕರಣರೀತ್ಯಾ ಅಶುದ್ಧವಷ್ಟೇ ಅಲ್ಲ, ಕೇಳಲು ಸಹ ಚೆನ್ನಾಗಿಲ್ಲ. ಕೇಳಲಾದರೂ ಚೆನ್ನಾಗಿದ್ದರೆ ಒಪ್ಪಿಕೊಳ್ಳಬಹುದೇನೋ...

ಸಮಾಸಗಳದೊಂದಾದರೆ ಮತ್ತೊಂದು ವಿಶೇಷಣಗಳದ್ದು. ಅನೇಕರ ಬರೆಹಗಳಲ್ಲಿ "ಬುದ್ಧಿಮಾಂದ್ಯ ಮಕ್ಕಳು" ಎಂಬ ಪದಪುಂಜ ಕಾಣುತ್ತದೆ. ಮಂದ ಬುದ್ಧಿ ಇರುವವರು ಬುದ್ಧಿಮಂದರು. ಬುದ್ಧಿಮಂದರ ಭಾವ ಬುದ್ಧಿಮಾಂದ್ಯ. ಹೀಗೆ ಬುದ್ಧಿಮಾಂದ್ಯ ಒಂದು ನಾಮಪದ. ಈ ಪದ "ಮಕ್ಕಳು" ಎಂಬ ಪದಕ್ಕೆ ವಿಶೇಷಣವಾಗಲು ಹೇಗೆ ಸಾಧ್ಯ? ಪ್ರೊ. ಜಿ. ವೆಂಕಟಸುಬ್ಬಯ್ಯನವರು 'ಅಂಗವಿಕಲ' ಎಂಬ ಪದಕ್ಕೆ ಬದಲಾಗಿ 'ವಿಕಲಚೇತನ' ಎಂಬ ಪದವನ್ನು ಸೂಚಿಸಿದ್ದಾರೆ. ಹಾಗೆ ಸೂಚಿಸಿದಾಗ ಅವರು ಪ್ರಾಯಃ ಅನ್ಯಮನಸ್ಕರಾಗಿದ್ದರೇನೋ. 'ಅಂಗವಿಕಲ'ರ ಅಂಗ(ಗಳು) ಮಾತ್ರ ವಿಕಲ. ಆದರೆ ವಿಕಲಚೇತನರ ಮನಸ್ಸು-ಬುದ್ಧಿ-ಆತ್ಮಗಳೇ ವಿಕಲ!(ಚೇತನ = soul , mind L. ; n.consciousness , understanding , sense , intelligence) ಆಂಗ್ಲದ 'differently abled' ಎಂಬ ಅರ್ಥ ತರಲು ಹೋಗಿ ಇದು ಎಂತಹ ಆಭಾಸವಾಯಿತು! ಕನ್ನಡದ ಎಲ್ಲ ಪತ್ರಿಕೆಗಳಲ್ಲಿಯೂ ಈ ಪದಗಳು ರಾರಾಜಿಸುತ್ತವೆ ಎಂಬುದು ದುಃಖದ ಸಂಗತಿ.

ಇದೇ ತೆರನಾದ ಮತ್ತೊಂದು ಸಮಸ್ಯೆ "ಪ್ರಾಧಾನ್ಯತೆ", "ನೈಪುಣ್ಯತೆ" ಮುಂತಾದ "ತೆ" ಗಳದ್ದು. ಪ್ರಧಾನನ ಭಾವ ಪ್ರಾಧಾನ್ಯ, ನಿಪುಣನ(ಳ) ಭಾವ ನೈಪುಣ್ಯ. 'ಪ್ರಧಾನ' ಮತ್ತು 'ನಿಪುಣ' ಎಂಬ ಪದಗಳಿಗೆ 'ತೆ' ಎಂಬ ಪ್ರತ್ಯಯ ಸೇರಿಸಿ ಪ್ರಧಾನತೆ ಮತ್ತು ನಿಪುಣತೆ ಎಂದು ಬೇಕಾದರೆ ಹೇಳಬಹುದು. ಈ ಪ್ರಯೋಗದಲ್ಲಿ ವಿಶೇಷಣಗಳಾದ ಪ್ರಧಾನ ಮತ್ತು ನಿಪುಣ ಎಂಬ ಪದಗಳು ನಾಮಪದಗಳಾಗುತ್ತವೆ. ಈಗ ಈ ಪದಗಳಿಗೆ - ಉದಾ. ಪ್ರಾಧಾನ್ಯ ಎಂಬ ಪದಕ್ಕೆ "ತೆ" ಎಂಬ ಪ್ರತ್ಯಯ ಸೇರಿಸಿದರೆ "ಪ್ರಧಾನನ ಭಾವದ ಭಾವ" ಎಂಬ ಅರ್ಥ ಉಂಟಾಗುತ್ತದೆ. 'ನೈಪುಣ್ಯತೆ' ಕೂಡ ಹಾಗೆಯೇ. ಇದನ್ನು ಅರ್ಥೈಸಿಕೊಳ್ಳುವ ನನ್ನ ಪ್ರಯತ್ನ ವಿಫಲವಾಗಿ ಇದನ್ನು ಅಪಶಬ್ದಗಳ ಗುಂಪಿಗೆ ಸೇರಿಸಿದ್ದೇನೆ. ನೀವೇನಂತೀರಿ?

ಇನ್ನು ಜಾಹೀರಾತುಗಳಲ್ಲಿ ಕೇಳಿಬರುವ ಕನ್ನಡದ ಬಗ್ಗೆ. ಹಿಂದೆ ಉತ್ಪನ್ನಗಳು ಕಡಿಮೆ ಇದ್ದುದರಿಂದಲೋ ಏನೋ, ಜಾಹೀರಾತುಗಳು ಕಡಿಮೆ ಇರುತ್ತಿದ್ದವು. ಅಲ್ಲಿ ಪ್ರಯೋಗಿಸಿದ ಭಾಷೆ ಕೂಡ ಚೆನ್ನಾಗಿರುತ್ತಿತ್ತು. "ನನ್ನ ನಲ್ಲನ ಹೊಲದಲ್ಲಿ..." ಎಂಬ ರೇಡಿಯೊ-ದ ಜಾಹೀರಾತಿನಲ್ಲಿ ಸ್ವಲ್ಪ ಶಬ್ದಾಲಂಕಾರವೂ ಕಾಣುತ್ತದೆ. ಆ ಜಾಹೀರಾತುಗಳ ದರ್ಜೆ ಅದು. ಆದರೆ ಇಂದು? ಪುನಃ-ಚಿತ್ರೀಕರಣ ದುಬಾರಿಯಾದುದರಿಂದ ಹಿಂದಿಯಲ್ಲೋ ತಮಿಳಿನಲ್ಲೋ ಇರುವ ಜಾಹೀರಾತನ್ನು ಡಬ್ ಮಾಡಲಾಗುತ್ತದೆ. ನಮ್ಮವರು ಅದೇ ರಾಗಗಳಿಗೆ ತಮ್ಮ ಸಾಹಿತ್ಯವನ್ನು ಜೋಡಿಸಿ ಅದನ್ನು ಪ್ರದರ್ಶಿಸುತ್ತಾರೆ. ಕನ್ನಡದಂತೆ ಒತ್ತಕ್ಷರಗಳು ಹಿಂದಿಯಲ್ಲಿ ಇಲ್ಲವಾದ್ದರಿಂದ ಈ ಜಾಹೀರಾತುಗಳು ಕರ್ಣಕಠೋರವಾಗಿರುತ್ತವೆ. ಅದೇ ಸಂಗೀತವನ್ನು ಇಟ್ಟುಕೊಂಡು ಇನ್ನೂ ಚೆನ್ನಾದ ಸಾಹಿತ್ಯವನ್ನು ಅಳವಡಿಸಿ ಹಾಡಲು ಸಾಧ್ಯವಿದೆ. ಉದಾಹರಣೆಗೆ "ಬೆಸೆದಿರಲಿ... ಜೀವನದಾ-ಸಂಪರ್ಕ ಕೊಂಡಿ" ಎಂಬುದನ್ನು 'ಬೆಸೆದಿರಲಿ ಜೀವನದ ಮಧುರ ಬಾಂಧವ್ಯ.." ಎಂಬುದಾಗಿಯೋ, ಅಥವಾ ಇನ್ನೂ ಚೆನ್ನಾಗಿರುವ ಪದಗಳನ್ನು ಬಳಸಿ ಹಾಡಲು ಸಾಧ್ಯವಿಲ್ಲವೇ? ಈ ಕೆಲಸ ಸ್ವಲ್ಪ ಕಷ್ಟ, ಆದರೂ ಕನ್ನಡದಲ್ಲಿರುವ ಸೊಗಸನ್ನು ಉಳಿಸಿಕೊಳ್ಳಲು ಅಷ್ಟಾದರೂ ಪ್ರಯತ್ನ ಪಡಬಹುದು ಎಂದು ನನ್ನ ಭಾವನೆ.

ಇತ್ತೀಚೆಗೆ ಒಬ್ಬ ಹಿರಿಯರು ಸಖೇದರಾಗಿ "ಕನ್ನಡದ ಆಯುಷ್ಯ ಇನ್ನು ಎಪ್ಪತ್ತು-ಎಂಭತ್ತು ವರ್ಷಗಳಷ್ಟು ಮಾತ್ರ ಎಂದು ಅನ್ನಿಸುತ್ತದೆ" ಎಂದು ಹೇಳಿದರು. ಈಗಿನ ಕನ್ನಡದ ಪರಿಸ್ಥಿತಿ ನೋಡಿದರೆ ಅವರು ಹೇಳಿದ್ದು ನಿಜವೆಂದೇ ಅನ್ನಿಸುತ್ತದೆ. ನಮ್ಮ ಪ್ರೀತಿಯ ಕನ್ನಡನುಡಿಯ ಆಯುಷ್ಯವನ್ನು ಹೆಚ್ಚಿಸಲು ನಾವೇನು ಮಾಡಬಹುದು?

ಇದನ್ನೂ ಓದಿ:
Random ramblings: ಎಷ್ಟು ದಿವಸಗಳಾದವು ಬರೆದು!!

Thursday, August 02, 2007

ಜೀವನಯಾತ್ರೆಯು ಸಾಗುತಿದೆ

ಚಿತ್ರಕವನಹನ್ನೆರಡನೆಯ ಚಿತ್ರಕ್ಕಾಗಿ ಬರೆದ ಎರಡು ಮುಕ್ತಕಗಳು

೧.
ಜನ್ಮಜನ್ಮಗಳ ಸಹಚರರಿವರು
ಜೀವನಯಾತ್ರೆಯ ಪಯಣಿಗರು
ಬಾಳಿನ ಸಂಜೆಯ ಸೊಬಗ ಹೀರುವರು
ಜೊತೆಜೊತೆಯಾಗಿಯೆ ನಲಿಯುವರು

೨.
ಕಣ್ಣಲಿ ಸೋಡ ಇದ್ದರೇನಂತೆ
ಚೆಲುವು ನೋಡುವರ ಕಣ್ಣಲ್ಲಿ!
ಅವರ ಕಣ್ಣಿಗಿವರೆಂದೂ ತರುಣಿಯೆ,
ಇವರ ಕಣ್ಣಿಗವರೂ ತರುಣ!

Monday, July 23, 2007

ಶಚೀಹತ

ಇತ್ತೀಚೆಗೆ ಒಂದು ಮೀಟಿಂಗಿನಲ್ಲಿ ಕುಳಿತಿದ್ದಾಗ, ಅಲ್ಲೇ ಮೇಜಿನ ಮೇಲಿದ್ದ ಮಾರ್ಕರ್ ಅನ್ನು ಕೈಗೆ ತೆಗೆದುಕೊಂಡು ನೋಡುತ್ತಿದ್ದೆ. ಅದರ ಮೇಲೆ Shachihata ಎಂದು ಬರೆದಿತ್ತು. ಈ ಹೆಸರು ಜಪಾನೀಯ ಹೆಸರೆಂದು ಅನ್ನಿಸಿದರೂ, ನಮ್ಮ ಭಾಷೆಯಲ್ಲಿ ಇದಕ್ಕೆ ಏನು ಅರ್ಥವನ್ನು ಕೊಡಬಹುದೆಂಬ ಯೋಚನೆ ಬಂದಿತು.

"ಶಚೀಹತ" ಎಂಬ ಸಮಾಸವನ್ನು ಎರಡು ರೀತಿಗಳಲ್ಲಿ ಬಿಡಿಸಬಹುದು. ಒಂದು ತೃತೀಯಾ ತತ್ಪುರುಷ-ಸಮಾಸ, 'ಶಚ್ಯಾ ಹತಃ' - ಶಚಿಯಿಂದ ಹತನಾದವನು ಎಂದು. ಇನ್ನೊಂದು ಪಂಚಮೀ ತತ್ಪುರುಷಸಮಾಸ, "ಶಚ್ಯಾಃ ಹತಃ" - ಶಚಿಯ ಕಾರಣದಿಂದ ಹತನಾದವನು ಎಂದು. ಹತ ಎನ್ನುವುದಕ್ಕೆ ಸಂಸ್ಕೃತದಲ್ಲಿ ನಾನಾ ಅರ್ಥಗಳಿವೆ. "ಹಾಳಾಗಿದ್ದು" ಎಂಬ ಅರ್ಥವೂ ಒಂದುಂಟು. ಮೊದಲನೆಯದಕ್ಕೆ, ಎಂದರೆ ಶಚಿಯಿಂದ ಹತನಾದವನ ಉದಾಹರಣೆ ನನಗೆ ಸಿಗಲಿಲ್ಲ. ಆದರೆ ಶಚಿಯ ಕಾರಣದಿಂದ ಹಾಳಾದವರು ದೊರೆತರು.

ವೇದಗಳ ಪ್ರಕಾರ ಇಂದ್ರ ಇಂದ್ರಿಯಗಳಿಗೆ ಸ್ವಾಮಿ. ಅವನ ಪತ್ನಿಯಾದ ಇಂದ್ರಾಣೀ ಅಥವಾ ಶಚೀ, ಇಂದ್ರಿಯವಸ್ತುಗಳಿಗೆ ಅಧಿದೇವತೆ. ಒಂದರ್ಥದಲ್ಲಿ "ಶಚೀಹತ" ಎಂದರೆ ಇಂದ್ರಿಯವಸ್ತುಗಳಿಂದ ಹಾಳಾದವರು ಎಂದು ಹೇಳಬಹುದಾದರೂ ಈ ಅರ್ಥ ನನಗೆ ಅಷ್ಟು ರುಚಿಸಲಿಲ್ಲ.

ಪುರಾಣಗಳಲ್ಲಿ ಬರುವ ಒಂದು ಕಥೆ ಹೀಗಿದೆ. ವೃತ್ರಾಸುರನನ್ನು ಸಂಹರಿಸಿದ ಇಂದ್ರ ಆ ಪಾಪವನ್ನು ನಿವಾರಿಸಿಕೊಳ್ಳಲು, ಹತ್ಯೆಯಿಂದ ತಪ್ಪಿಸಿಕೊಳ್ಳಲು ಅಡಗಿಕೊಳ್ಳುತ್ತಾನೆ. ಲೋಕವು ಅನಿಂದ್ರವಾಗುವುದನ್ನು ತಪ್ಪಿಸಲು ದೇವತೆಗಳು ಧರ್ಮಿಷ್ಠನಾದ ಮಹಾರಾಜ ನಹುಷನನ್ನು ಕರೆತಂದು ಇಂದ್ರನನ್ನಾಗಿ ಮಾಡುತ್ತಾರೆ. ಅಧಿಕಾರಮದದಿಂದ ನಹುಷ ಶಚಿಯನ್ನು ಬಯಸುತ್ತಾನೆ. ಪಲ್ಲಕ್ಕಿಯಲ್ಲಿ ಹೋಗುತ್ತಿರುವಾಗ ಬೇಗ ಹೋಗೆಂದು ಒಬ್ಬ ಋಷಿಯನ್ನು ಒದ್ದಾಗ ಕ್ರುದ್ಧನಾದ ಆ ಋಷಿ "ಅಜಗರನಾಗು" ಎಂದು ನಹುಷನನ್ನು ಶಪಿಸುತ್ತಾನೆ. ನಹುಷ ಅಜಗರನಾಗಿ ಭೂಮಿಯಲ್ಲಿ ಬೀಳುತ್ತಾನೆ. ಮುಂದೆ ಊಟಕ್ಕಾಗಿ ಭೀಮನನ್ನು ಹಿಡಿದು, ಯುಧಿಷ್ಠಿರ ಅವನನ್ನು ಬಿಡಿಸಿದಾಗ ಅವನಿಗೆ ಶಾಪವಿಮೋಚನೆಯಾಗುತ್ತದೆ. 'ಶಚೀಹತ' ಎಂಬುದು ನಹುಷನಿಗೆ ಅನ್ವರ್ಥನಾಮವಾಗುತ್ತದೆ.

ಇದೇ ಕಥೆಯನ್ನು ಹಿರಿಯ ಲೇಖಕರಾದ ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳು 'ಮಹಾಕ್ಷತ್ರಿಯ' ಎಂಬ ಸುಂದರ ಕೃತಿಯಲ್ಲಿ ಸ್ವಲ್ಪ ಭಿನ್ನವಾಗಿ ಮೂಡಿಸಿದ್ದಾರೆ. ನಹುಷನೇ ಇಲ್ಲಿ ಮಹಾಕ್ಷತ್ರಿಯ. ವೇದಕಾಲದ ಇಂದ್ರನಿಗೆ ಸಲ್ಲಬೇಕಾದಷ್ಟು ಮರ್ಯಾದೆಯನ್ನು ಸಲ್ಲಿಸುತ್ತಲೇ, ಮಾನವನಾದ ನಹುಷನನ್ನೂ ಇಂದ್ರನಿಗೆ ಸಮಾನವಾಗಿ ಚಿತ್ರಿಸಿದ್ದಾರೆ. ಸನ್ನಿವೇಶಗಳೇನೋ ಮೇಲೆ ಹೇಳಿದಂತೆಯೇ, ಆದರೆ ಪಾತ್ರಗಳ ಉದ್ದೇಶಗಳು ಮಾತ್ರ ಬೇರೆಯವು. ಇಲ್ಲಿ ನಹುಷ ಏಕಪತ್ನೀವ್ರತಸ್ಥ. ಇಂದ್ರ ಮರಳಿ ಬಂದಾಗ ನಹುಷನಂಥವನು ಇನ್ನು ನಮಗೆ ರಾಜನಾಗಿರುವುದಿಲ್ಲವಲ್ಲ ಎಂದು ದೇವತೆಗಳೂ ಮರುಗುವಷ್ಟು ದೊಡ್ಡ ವ್ಯಕ್ತಿ ಅವನು. ಹಳೆಯ ಇಂದ್ರನಿಗೆ ಅಧಿಕಾರವನ್ನು ಮರಳಿಸುವ ಮುಂಚೆ ಅವನು ಮಾಡದ ಒಂದು ಕೆಲಸವನ್ನು ಮಾಡಬೇಕೆಂದು ಸಂಕಲ್ಪಿಸಿ ನಹುಷ 'ಸಪ್ತರ್ಷಿಶಿಬಿಕಾರೋಹಣ'ವನ್ನು ಮಾಡುತ್ತಾನೆ. ಸಪ್ತರ್ಷಿಗಳು ಹೊತ್ತ ಶಿಬಿಕೆಯನ್ನು ಏರುವುದು 'ಸಪ್ತರ್ಷಿಶಿಬಿಕಾರೋಹಣ'. ಮಹಿಮಾನ್ವಿತವಾದ ಪಲ್ಲಕ್ಕಿಯಾದ್ದರಿಂದ ಅದರಲ್ಲಿ ಕುಳಿತವರು ಸಮಾಧಿಸ್ಥರಾಗಿಯೇ ಇರಬೇಕು. ಸಮಾಧಿಯಿಂದ ಕದಲಿದರೆ ಭ್ರಷ್ಟನಾಗುವುದು ನಿಶ್ಚಿತ. ಮುಂದೆ ಹೀಗಾಗುವುದೆಂದು ತಿಳಿದಿದ್ದರೂ ನಹುಷನೇ ಶಿಬಿಕಾರೋಹಣವನ್ನು ಮಾಡಿ, ಶಾಪವನ್ನೂ ಸಮಚಿತ್ತನಾಗಿ ಧರಿಸುತ್ತಾನೆ.

ನನಗೆ ಭಾಸ ತನ್ನ 'ಪಂಚರಾತ್ರ'ದಲ್ಲಿ ಮತ್ತು ರನ್ನ ತನ್ನ 'ಗದಾಯುದ್ಧ'ದಲ್ಲಿ ದುರ್ಯೊಧನನನ್ನು ಒಳ್ಳೆಯವನಂತೆ ಚಿತ್ರಿಸಿರುವುದು ಇಷ್ಟವಿಲ್ಲ. ಆದರೆ 'ಮಹಾಕ್ಷತ್ರಿಯ'ದಲ್ಲಿ ನಹುಷನನ್ನು ಒಳ್ಳೆಯ ಪಾತ್ರವನ್ನಾಗಿ ಚಿತ್ರಿಸಿರುವುದು ಬಹಳ ರುಚಿಸಿತು. ನನ್ನ ಪೂರ್ವಗ್ರಹಗಳೇ ಇದಕ್ಕೆ ಕಾರಣವಾದರೂ, ಕೇವಲ ಒಂದು ಕಾದಂಬರಿಯ ದೃಷ್ಟಿಯಿಂದ ನೋಡಿದರೂ 'ಮಹಾಕ್ಷತ್ರಿಯ' ಒಂದು ಉತ್ತಮೋತ್ತಮವಾದ ಕೃತಿ.

ದೇವುಡು ಅವರ ಕಾದಂಬರಿಗಳ ಶೈಲಿ ಇತರರ ಶೈಲಿಗಿಂತ ಭಿನ್ನ. ಅವರ ಭಾಷೆ ಸಂಸ್ಕೃತಭೂಯಿಷ್ಠವಾಗಿ, ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವೇ ಎಂದೆನ್ನಬಹುದು. ಅವರು ಹೇಳುವ ವಿಷಯದ ಬೋಧೆಯಾಗುವುದು ಇನ್ನೂ ಕಷ್ಟತರ (ನನ್ನ ಪತಿ ಹೇಳುವಂತೆ, ಅವರ ಕಾದಂಬರಿಯನ್ನು ಓದುವ ಬದಲು ಯಾವುದಾದರೂ ಉಪನಿಷತ್ತನ್ನೇ ಓದಬಹುದು!). ಆದರೆ ಅವರ ಭಾಷೆಯನ್ನೂ, ವಿಷಯವನ್ನೂ ಅರ್ಥ ಮಾಡಿಕೊಂಡರೆ ಆಗುವ ಆನಂದ, ಸಿಗುವ ತೃಪ್ತಿ ಮಾತ್ರ ಅನನ್ಯಸಾಧ್ಯ. ಅವರು ಬರೆದಿರುವ ಅನೇಕ ವಿಷಯಗಳು ಸಾಧನೆಯಿಂದ ಮತ್ತು ಅನುಭವದಿಂದ ಅವರಿಗೆ ಗೋಚರವಾದವು ಎಂಬುದನ್ನು ನೆನೆದರೆ ರೋಮಾಂಚನವಾಗುತ್ತದೆ. ವಸ್ತುಗಳನ್ನೂ ಸಂದರ್ಭಗಳನ್ನೂ ಕಣ್ಣಿಗೆ ಕಟ್ಟುವಂತೆ, ಅಲಂಕಾರಯುತವಾಗಿ ವರ್ಣನೆ ಮಾಡುವಲ್ಲಿ ಇನ್ನಾರೂ ದೇವುಡು ಅವರನ್ನು ಸರಿಗಟ್ಟಲಾರರು.

ದೇವುಡು ಅವರ ಇತರ ಪುಸ್ತಕಗಳು 'ಮಹಾಬ್ರಾಹ್ಮಣ' (ವಿಶ್ವಾಮಿತ್ರ ಬ್ರಹ್ಮರ್ಷಿಯಾದ ಕಥೆ), 'ಮಹಾದರ್ಶನ' (ಯಾಜ್ಞವಲ್ಕ್ಯರು ಶುಕ್ಲಯಜುರ್ವೇದವನ್ನು ಪಡೆದು 'ಸರ್ವಜ್ಞ'ನೆಂದು ಪುರಸ್ಕೃತರಾದ ಕಥೆ), ಮತ್ತು 'ಮಯೂರ' (ಮಯೂರವರ್ಮ ಪಲ್ಲವರನ್ನು ಸೋಲಿಸಿ ಕದಂಬರಾಜ್ಯಸ್ಥಾಪನೆಗೈದ ಕಥೆ - ಈ ಕಾದಂಬರಿಯನ್ನು ಚಿತ್ರೀಕರಿಸಿದ್ದಾರೆ. ಚಿತ್ರಕ್ಕಿಂತ ಕಾದಂಬರಿ ಶತಕೋಟಿಶಃ ಚೆನ್ನಾಗಿದೆಯೆಂದು ನನ್ನ ಅಭಿಪ್ರಾಯ). ಮೂರೂ ಉತ್ತಮವಾದ ಕಾದಂಬರಿಗಳೇ. ಈ ಪುಸ್ತಕಗಳನ್ನು ಓದಿ ಮುಗಿಸಿದಾಗ ಮನಸ್ಸಿನಲ್ಲುಳಿಯುವುದು ಶಾಂತಭಾವ.

ಒಂದು ಮಾರ್ಕರ್ ನ ದಯೆಯಿಂದ, ನನ್ನ ಮನಸ್ಸಿನಲ್ಲೂ ಈಗ ಇರುವುದು ಶಾಂತಭಾವ!

Wednesday, July 11, 2007

ತುಂಟ ಕರಡಿ ತನ್ನ ತಮ್ಮನಿಗೆ ಹೇಳಿದ್ದು

ಚಿತ್ರಕವನ ಒಂಭತ್ತನೆಯ ಚಿತ್ರಕ್ಕಾಗಿ ಬರೆದ ಪದ್ಯ.

ಕಿಟಕಿಯ ಸರಳುಗಳಾಚೆಯ ಜಗವದು
ಎಷ್ಟು ಸುಂದರವು, ನೋಡಿದೆಯಾ?
ಚಿಗುರಿದ ಮರಗಳು, ಅರಳಿದ ಹೂಗಳು
ಕರೆದಿವೆ ನಮ್ಮನು, ಕೇಳಿದೆಯಾ?

ಮಾವಿನ ಮರದಲ್ಲಿರುವ ಜೇನನ್ನು
ಸವಿಯಲು ಸಹಚರನಾಗುವೆಯಾ?
ಹಲಸಿನ ಹಣ್ಣನು ಮೆಲ್ಲನೆ ಬಿಡಿಸುತ
ಮೆಲ್ಲಲು ನೀ ಜತೆಗೂಡುವೆಯಾ?

ನಿದ್ದೆಯ ಹೊತ್ತಲಿ ನೀರಲಾಡಿದ್ದು
ಅಮ್ಮಗೆ ನೀನೇ ಹೇಳಿದೆಯಾ?
ಪಕ್ಕದ ಹಳ್ಳಿಯ ಜನರ ಕೆಣಕಿದ್ದು
ಅವಳಿಗೆ ಕೋಪವ ತರಿಸಿದೆಯಾ?

ನಮ್ಮ ಚೇಷ್ಟೆಗಳು ಮೀರಿದವೇ ಮಿತಿ?
ಚಿಣ್ಣರ ಮೇಲೆಯೆ ಹಠ ಸರಿಯಾ?
ಕೂಡಿ ಹಾಕಿಹಳು ಅಮ್ಮನು ನಮ್ಮನು
ಏನ ಮಾಡುವುದು, ಯೋಚಿಸೆಯಾ?

Tuesday, June 05, 2007

ಋಜುವಾದ ಮಾತು

ಈಚೆಗೆ ಸುದ್ದಿ ಮಾಡುತ್ತಿರುವ ವಿಷಯ 'ಆವರಣ'ದ ಮತ್ತು ಭೈರಪ್ಪನವರ ಬಗ್ಗೆ ಯು. ಆರ್. ಅನಂತಮೂರ್ತಿಯವರು ಮಾಡಿದ ಟೀಕೆ. ಯು.ಆರ್‍.ಏ ಅವರು ಮೊದಲು ಮಾಡಿದ ಟೀಕೆಗೆ ಸ್ಪಂದಿಸಿದ ಅನೇಕಜನ ವಿವಿಧಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಜಯಕರ್ಣಾಟಕವನ್ನೂ, ಕೆಲವು ಸುಹೃದರ ಬ್ಲಾಗ್ ಗಳನ್ನೂ ಓದುವ ನನಗೆ ಭೈರಪ್ಪನವರ ಪರವಾಗಿಯೇ ಇಲ್ಲಿನ ಸ್ಪಂದನಗಳು ಇದ್ದದ್ದು ಅಚ್ಚರಿ ತರಿಸಲಿಲ್ಲ. ನನ್ನ ನಿಲುವೂ ಕೂಡ ಸುಮಾರು ಹಾಗೇ ಇದೆ.

ಅನಂತಮೂರ್ತಿಯವರ ಭಾಷೆಯ ಬಗ್ಗೆ ನನಗೆ ಮೊದಲಿನಿಂದಲೂ ಮೆಚ್ಚುಗೆ-ಗೌರವಗಳಿವೆ. ಬಹಳ ಚೆನ್ನಾಗಿ ಬರೆಯುತ್ತಾರೆ. ಆದರೆ ಒಳಹೊಕ್ಕು ನೋಡಿದರೆ ಅವರದು ಸತ್ತ್ವವೇ ಇಲ್ಲದ ಬರವಣಿಗೆ. ಇದಕ್ಕೆ ಕಾರಣ ಅವರ ಪೂರ್ವಗ್ರಹಗಳು. ಅವರ ಪುಸ್ತಕಗಳಲ್ಲಿ ನೈಜತೆ ಕಾಣಸಿಗದು. ಒಂದು ಕಥೆಯನ್ನು ಹೇಳುವಾಗ, ಅದು ಪಾತ್ರಗಳ ಕಥೆಯಾಗಿರಬೇಕು. ಪಾತ್ರಗಳು ಲೇಖಕನ ಸೃಷ್ಟಿಯಾಗಿದ್ದರೂ ಅವರ ಕ್ರಿಯೆ-ಭಾವ-ಅಭಿಪ್ರಾಯಗಳು ಲೇಖಕನವಲ್ಲದೆ ಅವುಗಳದೇ ಆದರೆ ಅಂಥ ಕಥೆ ನೈಜ ಎನಿಸುತ್ತದೆ. ಅನಂತಮೂರ್ತಿಯವರ ಬರೆಹಗಳಲ್ಲಿ ಈ ಗುಣ ನನಗೆ ಕಾಣಲಿಲ್ಲ. ತಮಾಷೆಯೆಂದರೆ ಅನಂತಮೂರ್ತಿಯವರು ಭೈರಪ್ಪನವರನ್ನು ಈ ವಿಷಯವಾಗಿ ಟೀಕಿಸಿರುವುದು!

ಭೈರಪ್ಪನವರ ಪುಸ್ತಕಗಳಲ್ಲಿ ಕವಿತ್ವದ ಆರ್ದ್ರತೆ ಇಲ್ಲ ಎಂದು ಅನಂತಮೂರ್ತಿಯವರು ಹೇಳುವುದನ್ನು ಒಪ್ಪುತ್ತೇನೆ. ಅವರ ಭಾಷೆ ಸ್ವಲ್ಪ ಗ್ರಾಮ್ಯ. ಆದರೆ ಭೈರಪ್ಪನವರ ಬರೆಹಗಳು (ಅನಂತಮೂರ್ತಿಯವರೂ ಒಪ್ಪುವಂತೆ) ಅದು ಹೇಗೆ ಅಷ್ಟು ಜನಪ್ರಿಯವಾದವು? ಒಂದಂತೂ ನಿಜ. ಸತ್ತ್ವಹೀನಕೃತಿಗಳು ಒಮ್ಮೊಮ್ಮೆ ಪ್ರಸಿದ್ಧವಾಗಬಹುದಾದರೂ ಸರ್ವಕಾಲದಲ್ಲಿಯೂ ಒಂದು ಕೃತಿ ಪ್ರಸಿದ್ಧವಾಗಬೇಕಾದರೆ ಅದರಲ್ಲಿ ಅಂತಃಸತ್ತ್ವ, ವಿಚಾರಶೀಲತೆ ಮತ್ತು ಪ್ರಾಮಾಣಿಕತೆಗಳು ಇರಬೇಕು. ಭೈರಪ್ಪನವರ ಕೃತಿಗಳಲ್ಲಿ ಈ ಗುಣಗಳಿರುವುದರಿಂದ ಅವರ ಕೃತಿಗಳು ಅಷ್ಟು ಜನಪ್ರೀತಿಯನ್ನು ಗಳಿಸಿವೆ. ಕೆಲವರು ಆರೋಪಿಸಿರುವಂತೆ ಭೈರಪ್ಪನವರು ಬ್ರಾಹ್ಮಣಶ್ರೇಷ್ಠತೆಯನ್ನು ಪ್ರತಿಪಾದಿಸುವುದಿಲ್ಲ. ಹಾಗೆ ನೋಡಲು ಹೋದರೆ ಅವರು ಯಾವ ವಿಷಯವನ್ನೂ ಪ್ರತಿಪಾದಿಸುವುದಿಲ್ಲ. ಪ್ರಶ್ನೆಗಳನ್ನು ಮಾತ್ರ ನಮ್ಮ ಮುಂದಿಟ್ಟು ಉತ್ತರದ ಬಗ್ಗೆ ನಾವೇ ಯೋಚನೆ ಮಾಡುವಂತೆ ಮಾಡುತ್ತಾರೆ. ಇದು ಉತ್ತಮಲೇಖಕನ ಗುರುತು. ಉದಾಹರಣೆಗೆ, 'ದಾಟು' ವಿನಲ್ಲಿ ಅಂತರ್ಜಾತೀಯ ವಿವಾಹಗಳ ಬೇರೆಬೇರೆ ವಿಧಗಳನ್ನು, ಬೇರೆಬೇರೆ ಜಾತಿಯವರಿಗೆ ತಮ್ಮ ಜಾತಿಯ ಮತ್ತು ಅನ್ಯಜಾತಿಗಳ ಬಗ್ಗೆ ಇರುವ ಭಾವನೆಗಳನ್ನು ಕಥೆಯ ಹಂದರದಲ್ಲಿ ಹೆಣೆದು, ಈ ವಿಷಯಗಳಲ್ಲಿ ನಮ್ಮ ಪ್ರಶ್ನೆಗಳನ್ನು ಪ್ರಚೋದಿಸುತ್ತಾರೆ. ಉತ್ತರಗಳನ್ನು ಕಂಡುಹಿಡಿಯುವುದು ಅವರವರಿಗೆ ಬಿಟ್ಟಿದ್ದು!

ಹಾಗೆ ನೋಡಿದರೆ ಭೈರಪ್ಪನವರ ನಿಲುವು ಹೀಗೆಯೇ ಎಂದು ನಿಖರವಾಗಿ ಹೇಳಬಲ್ಲ ಪುಸ್ತಕ 'ಆವರಣ'. ಸಾಹಿತ್ಯದೃಷ್ಟ್ಯಾ ಇದು ಭೈರಪ್ಪನವರ ಉತ್ತಮಕೃತಿಯೆಂದು ಖಂಡಿತ ಹೇಳಲಾಗದು. ಆದರೆ ಇಲ್ಲಿ ವಿವರಿಸಿರುವ ವಿಚಾರಗಳು ನಮ್ಮ ಇಂದಿನ "ಸೆಕ್ಯುಲರ್" ಜನತೆಗೆ ಅಗತ್ಯವಾಗಿ ತಿಳಿಹೇಳಬೇಕಾದವು. ಸತ್ಯದ ಸಮಾಧಿಯ ಮೇಲೆ ಸುಳ್ಳಿನ ಗೋಪುರವನ್ನು ಕಟ್ಟಲು ಹೊರಟಿರುವವರು ನಮ್ಮ ಇಂದಿನ ವಾಮಪಂಥೀಯರು. ಆಗಿರುವ ದುರಂತಗಳನ್ನು, ಹತ್ಯಾಕಾಂಡಗಳನ್ನು "ಆಗಲಿಲ್ಲ" ಎಂದೂ, ಆಗದ ಆಕ್ರಮಣಗಳನ್ನು "ಆಗಿದೆ" ಎಂದೂ ಸಾರುತ್ತಿರುವ, ಅದನ್ನೇ ನಂಬಿರುವ ವ್ಯಕ್ತಿಗಳು. ಒಂದು ಕೋಮಿನವರ ಮನಸ್ಸಂತೋಷಕ್ಕಾಗಿ ಮತ್ತೊಂದು ಕೋಮಿನವರನ್ನು ತುಳಿಯುವ ಮನಸ್ಸುಳ್ಳವರು. ಹಿಂದೂ-ಮುಸ್ಲಿಮರ ಸ್ನೇಹ ಭಾರತೀಯರಾದ ಎಲ್ಲರಿಗೂ ಬೇಕಾದುದು. ಈ ಸ್ನೇಹ ಸತ್ಯದ ಬುನಾದಿಯ ಮೇಲೆ ನಿಲ್ಲಬೇಕೆಂಬುದು ಭೈರಪ್ಪನವರ ಮತ. ಹೌದು, ಇಸ್ಲಾಂ ಭಾರತದಲ್ಲಿರುವಷ್ಟು ಬೇರೆಲ್ಲೂ ವರ್ಣರಂಜಿತವಾಗಿಲ್ಲ. ಆದರೆ ಇನ್ನೂ ಮುಸ್ಲಿಮರಲ್ಲಿ ಬಹುಪತ್ನೀತ್ವ, ಮೂರು ಬಾರಿ ಹೇಳುವ ತಲಾಕ್ ಜಾರಿಯಲ್ಲಿದೆ. Uniform Civil Code ನ ಕನಸು ಕನಸಾಗಿಯೇ ಉಳಿದಿದೆ. ನಮ್ಮ ವಾಮಪಂಥೀಯರಿಗೋ ಇದು ಹೀಗೆಯೇ ಉಳಿಯಲಿ ಎಂದು. ಕಾಲಕ್ಕನುಗುಣವಾಗಿ ಮುಸ್ಲಿಮರೂ ಬದಲಾಗುವುದು ಬೇಡವೇ? ಹೌದು, ಕಬೀರ್, ಶಿರ್ಡಿಯ ಸಾಯಿಬಾಬಾ ಮುಂತಾದ ಕಾರಣಜನ್ಮರ ಜನ್ಮ ಮತ್ತು ವೃದ್ಧಿ ಇಂತಹುದೇ ಪರಿಸ್ಥಿತಿಯಲ್ಲಿ ಆಯಿತು. ಆದರೆ ಇದನ್ನೇ ಮುಂದಿಟ್ಟುಕೊಂಡು "ಮೊಗಲರ ಆಳ್ವಿಕೆಯಲ್ಲಿ ಹಿಂದೂಗಳು ಎಂದಿಗಿಂತ ಸಂತೋಷವಾಗಿದ್ದರು" ಎಂದು ಹೇಳಿದರೆ ಅದನ್ನು ಒಪ್ಪಲಾಗುತ್ತದೆಯೇ? ಔರಂಗಜೇಬ ಜೆಸಿಯಾ ವಿಧಿಸಿದ್ದು ಸುಳ್ಳಾಗುತ್ತದೆಯೇ?

ಮೂರ್ತಿಯವರು ತಮ್ಮೂರಿನ ದೇವಸ್ಥಾನಗಳನ್ನೆಲ್ಲವನ್ನೂ ಜೀರ್ಣೋದ್ಧಾರ ಮಾಡಿಸಿದ್ದು ಮಿರ್ಜಾ ಇಸ್ಮಾಯಿಲ್ ಸಾಹೇಬರು ಎಂದು ಮಾತಿನ ಮಧ್ಯೆ ಹೇಳಿದ್ದಾರೆ. ನಾನು ಇನ್ನೂ ಬಹಳಷ್ಟು ಉದಾಹರಣೆಗಳನ್ನು ಕೊಡಬಲ್ಲೆ. ಬಿ ಆರ್ ಚೋಪ್ರಾ ರವರ "ಮಹಾಭಾರತ್" ಧಾರಾವಾಹಿಯ ಸ್ಕ್ರಿಪ್ಟ್ ಬರೆದದ್ದು ರಾಹಿ ಮಾಸೂಮ್ ರಾಜಾ. ಹಿಂದಿಯ "ಬೈಜು ಬಾವ್ರಾ" ಚಿತ್ರದ 'ಮನ್ ತರ್‌ಪತ್ ಹರಿ ದರ್‌ಶನ್ ಕೋ ಆಜ್' ಗೀತೆಯನ್ನು ಬರೆದಿದ್ದು ಶಕೀಲ್ ಬದಾಯುನಿ, ಸಂಗೀತ ನಿರ್ದೇಶಕ ನೌಷಾದ್ ಮತ್ತು ಹಾಡಿದ್ದು ಮೊಹಮ್ಮದ್ ರಫಿ. ಆದರೆ ಇವರೆಲ್ಲರನ್ನೂ ಔರಂಗಜೇಬನನ್ನೂ ಹೋಲಿಸುವುದು ridiculous. ಭಾರತೀಯಮುಸಲ್ಮಾನರನೇಕರನ್ನು ನಾವು ನಮ್ಮವರೆಂದು ಕಂಡುಕೊಂಡಿರುವಂತೆಯೇ, ಹಾಗಿಲ್ಲದವರ ವರ್ತನೆಯನ್ನು (ವ್ಯಕ್ತಿಗಳನ್ನಲ್ಲ) ಖಂಡಿಸಬೇಕು. ಈ ದುಷ್ಕೃತ್ಯಗಳು ಹಿಂದೆ ಆಗಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಆಗಲೇ ಸುಭದ್ರಸಮಾಜದ ನಿರ್ಮಾಣ ಸಾಧ್ಯ. ಹೀಗೆ ಆಗಬಾರದು ಎಂದು ಹೇಳುವವರಿಗೆ ಸಾಮಾಜಿಕ ಜವಾಬ್ದಾರಿ ಇಲ್ಲವೆಂದೇ ಹೇಳಬೇಕಾಗುತ್ತದೆ.

ಅನಂತಮೂರ್ತಿಯವರು ಮ್ಯಾಕ್‌ಬೆತ್ ಅನ್ನು ಷೇಕ್ಸ್‌ಪಿಯರ್ ನೋಡಿರುವ ರೀತಿಯನ್ನು ಉದಾಹರಿಸಿದ್ದಾರೆ. (ತನ್ಮೂಲಕ ಔರಂಗಜೇಬನನ್ನೂ ಮನುಷ್ಯನನ್ನಾಗಿ ನೋಡುವ ತಮ್ಮನ್ನು ಆ ಮಹಾಕವಿಯ ಜೊತೆ ಹೋಲಿಸಿಕೊಂಡಿದ್ದಾರೆ!) ಷೇಕ್ಸ್‌ಪಿಯರ್ ಮ್ಯಾಕ್‌ಬೆತ್ ನನ್ನು ಮನುಷ್ಯನನ್ನಾಗಿ ನೋಡಿದರೂ ಅವನು ಮಾಡಿದ ಕೊಲೆಯನ್ನು ಮರೆಮಾಚಲಿಲ್ಲ. ಆದರೆ ಆವರಣದ ಬಹುತೇಕ ಟೀಕಾಕಾರರು ಔರಂಗಜೇಬ ದೇವಸ್ಥಾನಗಳನ್ನು ನಾಶ ಪಡಿಸಲಿಲ್ಲವೆಂಬುದನ್ನೇ ಒರಲುತ್ತಾರೆ. ಅಥವಾ ನಾಶಪಡಿಸಿದುದನ್ನು ಈಗೇಕೆ ಹೇಳಬೇಕು ಎಂದು ಹೇಳುತ್ತಾರೆ. ತದ್ವಿರುದ್ಧವಾಗಿರುವ ಜರ್ಮನರ ವರ್ತನೆಯನ್ನು ನೋಡಿ. ನಾಜಿಗಳು ಯಹೂದ್ಯರ ಮೇಲೆ ನಡೆಸಿದ ಹತ್ಯಾಕಾಂಡವನ್ನು ಜರ್ಮನರುಎಂದೂ ಮರೆಮಾಚಲಿಲ್ಲ. ಹಾಗಾಗಿ ಅವರವರಲ್ಲಿ ಇಂದು ಶಾಂತಿಯಿದೆ. ಆದರೆ ಭಾರತದಲ್ಲಿ ಹಾಗೆ ಆಗಲಿಲ್ಲವಾದ್ದರಿಂದ ಹಿಂದೂ-ಮುಸ್ಲಿಮರ ನಡುವೆ ಇರಬೇಕಾದಷ್ಟು ಸೌಹಾರ್ದ ಇಲ್ಲವಾಗಿದೆ. ಇದಕ್ಕೆ ಕಾರಣ ಯಾರು?

ಗುಪ್ತರಾಗಲಿ ರಾಷ್ಟ್ರಕೂಟರಾಗಲಿ ರಜಪೂತರಾಗಲಿ ಮೊಗಲರಾಗಲಿ ಮರಾಠರಾಗಲಿ, ಎಲ್ಲರೂ ಸಾಮ್ರಾಜ್ಯಗಳನ್ನು ಕಟ್ಟಿ ಬೆಳೆಸಿದವರು. ಅವರೆಲ್ಲರಲ್ಲಿ ಗುಣಗಳಿದ್ದಂತೆ ಅವಗುಣಗಳೂ ಇದ್ದವು. ನಾವು ಗುಣಗಳನ್ನು ಒಪ್ಪಿಕೊಂಡಂತೆಯೇ ಅವಗುಣಗಳನ್ನೂ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಚರಿತ್ರೆಯ ಮೂಲ ಉದ್ದೇಶಕ್ಕೇ ಕೊಡಲಿಯೇಟು ಬೀಳುತ್ತದೆ. ಹೊಸ ಚಿಗುರು ಹಳೆಯ ಬೇರಿನಿಂದಲೇ ಬರುವುದು. ಬೇರು ಸುಳ್ಳಿನದಾದರೆ ಗಿಡವೂ ಸುಳ್ಳೇ ಅಲ್ಲವೆ?

Tuesday, January 30, 2007

ತಮಿಳರೂ ನಾನೂ ಡಾ. ಸ್ವಾಮಿಯವರೂ

ಕೆಲವು ದಿನಗಳ ಹಿಂದೆ 'ತಮಿಳು ತಲೆಗಳ ನಡುವೆ' ಓದಿ ಮುಗಿಸಿದ್ದೆ. ಅದರ ಬಗ್ಗೆ ಈಗ ಬರೆಯಲು ಪುರಸತ್ತು ಸಿಕ್ಕಿದೆ.

ಪಾಠ ಮಾಡುವವರು ಎರಡು ಗುಣಗಳನ್ನು ಹೊಂದಿದ್ದರೆ ಚೆನ್ನ. ೧. ವಿಷಯವನ್ನು ಮನದಟ್ಟಾಗುವಂತೆ ತಿಳಿಸುವುದು ೨. ಪಾಠವು ಕಲ್ಲಿನ ಹೊರೆಯಂತಿರದೆ ವಿದ್ಯಾರ್ಥಿಗಳನ್ನು ರಂಜಿಸುವಂತೆ ಮಾಡುವುದು.

ಈ ರೀತಿ ಪಾಠ ಮಾಡುವವರು ಬಹಳ ಕಡಿಮೆ. ಡಾ. ಬಿ ಜಿ ಎಲ್ ಸ್ವಾಮಿಯವರು ಈ ಗುಂಪಿಗೆ ಸೇರುತ್ತಾರೆ. ವಿಷಯಪಾಂಡಿತ್ಯದ ಜೊತೆ ರಂಜನೀಯವಾಗಿ ಬರೆಯುವ ಕಲೆ ಕೂಡ ಇವರಿಗೆ ಸಿದ್ಧಿಸಿದೆ. ಇವರ ಹಸುರು ಹೊನ್ನು ಓದಿದಾಗ "ಅಬ್ಬಾ ನಮ್ಮ ಸಸ್ಯಶ್ರೀಯ ಅದ್ಭುತವೇ!" ಎಂದು ಅನ್ನಿಸಿತ್ತು. 'ತಮಿಳು ತಲೆಗಳ ನಡುವೆ' ಓದಿದಾಗ 'ಅಬ್ಬಾ ತಮಿಳರ ಭಂಡತನವೇ!" ಎಂದು ಅನ್ನಿಸಿತು. (ತಮಿಳರು ದಯವಿಟ್ಟು ಮನ್ನಿಸಬೇಕು. ಈ ಲೇಖನವನ್ನು ನೀವು ಓದುತ್ತಿರುವಿರಾದರೆ ಸ್ವಾಮಿಯವರು ನಿಮ್ಮಂತಹ ತಮಿಳರ ಬಗ್ಗೆ ತ.ತ.ನ ದಲ್ಲಿ ಬರೆದಿಲ್ಲವೆಂದು ಖಂಡಿತವಾಗಿ ಹೇಳಬಲ್ಲೆ).

ನಾನು ತಮಿಳುನಾಡಿನಲ್ಲಿ ಹೆಚ್ಚು ದಿನ ಇರಲಿಲ್ಲ. ಇದ್ದಿದ್ದೂ ಮಹಾನಗರವಾದ ಚೆನ್ನೈ ಯಲ್ಲಿ. ಚೂರುಪಾರು ತಮಿಳಿನ ಜೊತೆ ತೆಲುಗು ಚೆನ್ನಾಗಿ ಬಂದರೆ, ಬದುಕು ಸುಗಮವಾಗಿಯೇ ಇರುತ್ತದೆಯೆಂದು ಹೇಳಬೇಕು. ತಮಿಳುನಾಡಿನ ಬೇರೆಡೆಗಳಲ್ಲಿ ಕಾಣಿಸುವ ಭಾಷಾಂಧತೆ ಚೆನ್ನೈ ನಲ್ಲಿ ಕಡಿಮೆ ಎಂದು ಬೇರೆಯವರಿಂದ ಕೇಳಿ ತಿಳಿದಿದ್ದೇನೆ. ಆದರೂ ಭಾಷೆಯ ದೆಸೆಯಿಂದ ನಾನು ಸ್ವಲ್ಪ ಪಾಡುಗಳನ್ನು ಪಟ್ಟಿದ್ದೇನೆ. ಒಮ್ಮೆ ಪೂಜೆಗಾಗಿ ವೀಳೆಯದೆಲೆಯನ್ನು ಕೊಳ್ಳಲು ಹೋದೆ. ನನಗೆ ತಮಿಳಿನಲ್ಲಿ ಅದರ ಹೆಸರೇನೆಂದು ಗೊತ್ತಿರಲಿಲ್ಲ. ಆ ಅಂಗಡಿಯಾಕೆಯ ಹತ್ತಿರ ಸುಮಾರು ಸಾಮಾನುಗಳಿದ್ದವಾದ್ದರಿನ್ದ ಬೆರಳಿನಿಂದ ತೋರಿಸಿ "ಅದು ಕೊಡು" ಎಂದೆ. ಆಕೆಗೆ ಅರ್ಥ ಆಗಲಿಲ್ಲ. ತಿರುಗಿ ಕೇಳಿದ್ದಕ್ಕೆ "ತಮಿಳು ಕಲಿತು ಬಾ ಹೋಗು" ಎಂದು ಬೈದು ಕಳುಹಿಸಿದಳು. ವೀಳೆಯದೆಲೆ ಕೊಟ್ಟಳೋ ಇಲ್ಲವೋ ಮರೆತಿದೆ, ಆದರೆ ಬೈಸಿಕೊಂಡಿದ್ದು ನೆನಪಿದೆ.

ಮೇಲಿನ ರೀತಿಯ ಭಾಷಾಂಧತೆ ಸಾಮಾನ್ಯವಾದರೂ ಡಾ. ಸ್ವಾಮಿಯವರು ವರ್ಣಿಸಿರುವ ಭಾಷಾಂಧತೆ ಬೇರೆಯದೇ ರೀತಿಯದ್ದು. ತಮಿಳು ಸಾಹಿತ್ಯ-ಚರಿತ್ರೆ-ಸಂಸ್ಕೃತಿಯ ಬಹುತೇಕ ಸಂಶೋಧಕರು ತಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆಗಳನ್ನು ತಿಳಿಯಲು ಇಷ್ಟಪಡುವುದಿಲ್ಲ. ತಮಗೆ ಬೇಕಾದ ವಿಷಯಗಳೇ ಬೇರೆ ಭಾಷೆಗಳ ಜರ್ನಲ್ ಗಳಲ್ಲಿ ಬಂದಿದ್ದರೆ ಅವನ್ನು ಓದುವುದಿಲ್ಲ. ತಮ್ಮ ಥಿಯರಿಗಳ ಬಗ್ಗೆ ಇವರಿಗೆ ಇರುವ ನಂಬಿಕೆ ನೋಡಿದರೆ ಧೃತರಾಷ್ಟ್ರನಿಗೆ ದುರ್ಯೋಧನನ ಮೇಲಿದ್ದ ವ್ಯಾಮೋಹ ನೆನಪಿಗೆ ಬರುತ್ತದೆ. ಅವರ ವಾದಗಳಾದರೂ ಎಂಥವು? "ತಮಿಳು ಸ್ವತಂತ್ರವಾಗಿ ಬೇರೆ ಭಾಷೆಗಳ, ಅದೂ ಸಂಸ್ಕೃತಭಾಷೆಯ ಸಂಪರ್ಕವಿಲ್ಲದೆ ಹುಟ್ಟಿತು", "ತಮಿಳು ಎಲ್ಲ ಭಾಷೆಗಳಿಗಿಂತಲೂ, ಅದರಲ್ಲೂ ಸಂಸ್ಕೃತಭಾಷೆಗಿಂತ ಪ್ರಾಚೀನತರ", "ಕ್ರಿ.ಪೂ. ೧೦,೦೦೦ ರಲ್ಲಿ ತಮಿಳುಭಾಷೆಯ ಗ್ರಂಥಗಳು ಸಮುದ್ರದ ಪಾಲಾದವು, ಆದ್ದರಿಂದ ಅದರ ಹಳೆಯತನವನ್ನು ನಾವು ಪ್ರಶ್ನಿಸದೆ ನಂಬಬೇಕೇ ಹೊರತು, ಪುರಾವೆಗಳಿವೆಯೇ ಎಂದು ಕೇಳಬಾರದು", ಇವೇ ಮುಂತಾದ ರತ್ನಗಳು!

ಡಾ. ಸ್ವಾಮಿಯವರು ಹೇಳಿರುವಷ್ಟು ಭಾಷಾಂಧತೆ ತಮಿಳರಲ್ಲಿದೆಯೇ ಎಂಬ ಸಂಶಯ ಬರುವುದು ಸಹಜ. ನನ್ನದೇ ಅನುಭವ ಹೀಗಿದೆ. ನನಗೆ ಸಂಸ್ಕೃತದ ಬಗ್ಗೆ ಸ್ವಲ್ಪ ಹೆಚ್ಚಾದ ಅಭಿಮಾನವೇ ಇದೆ. ಅಮೆರಿಕದಲ್ಲಿದ್ದಾಗ ಸಂಸ್ಕೃತಭಾರತಿಯ ಕಾರ್ಯಕರ್ತ್ರಿಯಾಗಿದ್ದೆ. ಇದು ನನ್ನ ಜೊತೆ ಓದುತ್ತಿದ್ದ ಬೆಂಗಳೂರಿನ ತಮಿಳಳೊಬ್ಬಳಿಗೆ ಗೊತ್ತಿತ್ತು. ಮತಾಂತರ ಮಾಡಲು ಬರುವ ಮಿಷನರಿಯ ತೆರ ಒಂದು ದಿನ ಅವಳು ನನ್ನ ಹತ್ತಿರ ಬಂದು ತಮಿಳು ಅನೇಕ ಸಾವಿರ ವರ್ಷಗಳಷ್ಟು ಹಳೆಯದೆಂದೂ, ಎಂಥದೋ ಜಲಪ್ರಳಯದಲ್ಲಿ ಗ್ರಂಥಗಳು ಕಳೆದುಹೋದವೆಂದೂ, ಸಂಸ್ಕೃತಕ್ಕಿಂತ ತಮಿಳು ಹೆಚ್ಚು ಪ್ರಾಚೀನವೂ ಉತ್ತರವೂ (Comparative degree ಯಲ್ಲಿ 'ಉತ್ತಮ' ಕ್ಕಿಂತ 'ಉತ್ತರ' ಸೂಕ್ತವಾದುದು) ಆದದ್ದೆಂದೂ ನನಗೆ ಹೇಳಿದಳು. ಆ ಸಂಶೋಧನೆಯ ಜಾಲಪುಟಗಳನ್ನು ನನಗೆ ಕಳಿಸು, ನೋಡುತ್ತೇನೆ ಎಂದು ನನಗೆ ತೋಚಿದ ಬದಲು ಹೇಳಿದೆ. ಆಮೇಲೆ ನಾವಿಬ್ಬರೂ ಬೇರೆ ತರಗತಿಗಳಲ್ಲಿ ಇದ್ದಿದ್ದರಿಂದ ಅವಳ ಜೊತೆ ಮಾತನಾಡುವ ಸನ್ನಿವೇಶಗಳು ವಿರಳವಾಗಿ, ಈ ವಿಷಯ ಅಲ್ಲಿಗೇ ಮುಕ್ತಾಯವಾಯಿತು.

ಇಂಥ ಸಂಶೋಧನೆಗಳು ಬೇಸರವನ್ನೇಕೆ ಉಂಟುಮಾಡುತ್ತವೆ? ಬಾಯಿಗೆ ಬಂದ ರೀತಿಯಲ್ಲಿ, ಸಾಕ್ಷಿ-ಪುರಾವೆಗಳಿಲ್ಲದೆ ಥಿಯರಿಗಳನ್ನು ಸೃಷ್ಟಿಸಿದರೆ ಭಾಷೆಯ ಬೆಳವಣಿಗೆಗೆ ಕುಂದುಂಟಾಗುತ್ತದೆ. ಭಾಷೆಯ ಬಗ್ಗೆ ಅಭಿಮಾನ ತಪ್ಪಲ್ಲ, ಒಪ್ಪುವಂಥದ್ದೇ. ಆದರೆ ನಮ್ಮ ಇತಿಮಿತಿಗಳನ್ನು ನಾವು ಅರಿತಿರಬೇಕು. "ಪುರಾಣಮಿತ್ಯೇವ ನ ಸಾಧು ಸರ್ವಂ" ಎಂಬುದನ್ನು ತಿಳಿಯಬೇಕು. ದೇಶಾಭಿಮಾನಭಾಷಾಭಿಮಾನಗಳು ಅಗತ್ಯಕ್ಕಿಂತ ಹೆಚ್ಚಾದಾಗ "ನಮ್ಮ ಭಾಷೆಯು ಸ್ವತಂತ್ರವಾಗಿ ಹುಟ್ಟಿತು"... ಮುಂತಾದ ಧೋರಣೆಗಳು ಮನಸ್ಸಿನಲ್ಲಿ ಹುಟ್ಟುವುದೂ, ಈ ವಿಷಯಗಳಲ್ಲಿ ಸತ್ಯಾಸತ್ಯಗಳ ವಿವೇಚನೆಯಿಲ್ಲದೆ ಹೋಗುವುದೂ ಸಹಜವೇನೋ. ಪಾಪ ತಮಿಳರನ್ನು ಏಕೆ ಅನ್ನಬೇಕು, ನಮ್ಮ ಕೆಲವು ಆಧುನಿಕ ಸಂಸ್ಕೃತಜ್ಞರೂ, ಇತಿಹಾಸಜ್ಞರೂ ಮಾತನಾಡುವುದು ಇದೇ ಧಾಟಿಯಲ್ಲಿ. ಹುರುಳಿಲ್ಲದ ಬಾಲಿಶವಾದಗಳನ್ನು ಮಂಡಿಸಿ ಈ ವಿಷಯಗಳ ಬಗ್ಗೆಯೇ ಇತರರಿಗೆ ಅಸಡ್ಡೆ ಬರುವಂತೆ ಮಾಡುತ್ತಾರೆ. ಹೀಗಾದಾಗ, ಆ ಭಾಷೆ-ಸಂಸ್ಕೃತಿಗಳ ಬಗ್ಗೆ ನಿಜವಾದ ಕಳಕಳಿ ಮತ್ತು ಅಭಿಮಾನವಿರುವವರಿಗೆ ತಲೆ ಚಚ್ಚಿಕೊಳ್ಳೋಣವೆಂದು ಅನ್ನಿಸುತ್ತದೆ.

ಸಾಹಿತ್ಯದಲ್ಲಿ ಈ ರೀತಿಯಾದರೆ ಸಂಗೀತದಲ್ಲಿ ಇನ್ನೊಂದು ರೀತಿಯ ತಮಾಷೆ. ಸಂಗೀತದ ತ್ರಿಮೂರ್ತಿಗಳು ತಮಿಳುನಾಡಿನಲ್ಲಿಯೇ ಹುಟ್ಟಿ ಬೆಳೆದದ್ದು. ಆದರೆ ಅವರ ಬಹುತೇಕ ರಚನೆಗಳು ತೆಲುಗಿನಲ್ಲಿ ಮತ್ತು ಸಂಸ್ಕೃತದಲ್ಲಿ ಇವೆ. ತಮಿಳಿನಲ್ಲಿ ಅಕ್ಷರಗಳು ಕಡಿಮೆ ಇರುವುದರಿಂದ ಮಿಕ್ಕ ಭಾರತೀಯ ಭಾಷೆಗಳನ್ನು ಅದರಲ್ಲಿ ಬರೆಯುವುದೂ, ಬರೆದದ್ದನ್ನು ಅರ್ಥಮಾಡಿಕೊಳ್ಳುವುದೂ ದೊಡ್ಡ ಪ್ರಯಾಸ. ಈಗ ಉದಾಹರಣೆಗೆ, ಭಾರತಿಯರ್ ಎಂದು ತಮಿಳಿನಲ್ಲಿ ಬರೆಯಲು பாரதியர் ಎಂದು ಬರೆದರೆ ಅದು ಪಾರದಿಯರ್ ಆಗಬಹುದು ಅಥವಾ ಪಾರತಿಯರ್ ಕೂಡ ಆಗಬಹುದು. ಆದ್ದರಿಂದ, ತಿಳಿಯದ ಬೇರೆ ಭಾಷೆಗಳನ್ನು ಓದಬೇಕಾದರೆ ಊಹೆಯನ್ನೇ ಅವಲಂಬಿಸಬೇಕು. (ಗ್ರಂಥ ಎಂಬೊಂದು ಲಿಪಿ ಇದ್ದಿದ್ದು, ರಾಜಕೀಯಕಾರಣಗಳಿಂದಾಗಿ ಅದನ್ನು ಉಪಯೋಗಿಸದೆ ಇರುವುದು ಬೇರೆ ವಿಚಾರ.) ಹಾಗಾಗಿ ಸಂಸ್ಕೃತ-ತೆಲುಗು-ಕನ್ನಡದ ಕೃತಿಗಳು ತಮಿಳು ಸಂಗೀತಗಾರರ ಬಾಯಲ್ಲಿ ವಿಚಿತ್ರರೂಪಗಳನ್ನು ಪಡೆಯುತ್ತವೆ. 'ನಾರದ-ಬಯಗರ' ಎಂದು ವಿಷ್ಣುವನ್ನು ವರ್ಣಿಸಿದ್ದನ್ನು ('ಸಾರಸಾಕ್ಷ ಪರಿಪಾಲಯ ಮಾಂ' ಎಂಬ ಪಂತುವರಾಳಿಯ ಕೃತಿ) ಕೇಳಿ "ವಿಷ್ಣು ನಾರದನಿಗೆ ಯಾವಾಗ ಭಯ ಹುಟ್ಟಿಸಿದ?" ಎಂದು ಚಿಂತಿಸುತ್ತಿದ್ದಾಗ ಹೊಳೆದದ್ದು - ಅದು ನಾರದ-ಭಯಹರ ಎಂದು! ಶುದ್ಧ ತಮಿಳಿನಲ್ಲಿ ಹಕಾರವಿಲ್ಲ. ಈಗೀಗ ಹಕಾರದ ಸೇರ್ಪಡೆಯಾಗಿದೆ. ಆದರೂ ಮಾತನಾಡುವಾಗ ಮಹೇಶ ಮಗೇಸನಾಗುತ್ತಾನೆ. ಇದು ತಮಿಳಿನ ವಿಶೇಷತೆ ಎಂದು ಕರೆಯಬಹುದೇನೋ. ಆದರೆ ಸಂಗೀತವನ್ನು ನೂರಾರು-ಸಾವಿರಾರು ಜನರ ಮುಂದೆ ಹಾಡುವ ಕಲಾವಿದರ ಉಚ್ಚಾರಣೆ ಸರಿಯಾಗಿದ್ದರೆ ಚೆನ್ನ. ಒಂದು ಒಳ್ಳೆಯ ವಿಷಯವೆಂದರೆ ಯುವ-ಸಂಗೀತಗಾರರ ಸಂಗೀತದಲ್ಲಿ ಉಚ್ಚಾರಣಾ-ದೋಷ ಕೇಳಿಬರುತ್ತಿಲ್ಲವೆಂದು ಕೇಳಿದ್ದೇನೆ.

ಕೇವಲ ಒಂದು ಹಾಸ್ಯಭರಿತವಾದ ಪುಸ್ತಕವನ್ನು ಓದಬೇಕೆಂದು ತ.ತ.ನ ವನ್ನು ಕೈಗೆತ್ತಿಕೊಂಡರೂ ನಿರಾಸೆಯಾಗದಷ್ಟು ಚೆನ್ನಾಗಿ ಡಾ.ಸ್ವಾಮಿಯವರು ಹಾಸ್ಯದ ಮಧ್ಯೆಯೇ ವಿಚಾರಗಳನ್ನು ಹೆಣೆದಿದ್ದಾರೆ. ಪುರಂದರದಾಸರ (ಬುರಂತರ ತಾಶರ) ಆರಾಧನೆಯ ಬಗೆಗಿನ ಅಧ್ಯಾಯ ಓದುತ್ತಿದ್ದರಂತೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ಅವರ ಹಸುರು ಹೊನ್ನಿನಲ್ಲೂ ಇದೇ ರೀತಿಯ ಹಾಸ್ಯ ತುಂಬಿದೆ. ಈ ಹಾಸ್ಯ ಸಹಜವಾಗಿದ್ದು, ಘಟನೆಗಳು ನಿಜವಾಗಿ ನಡೆದವೇ ಇರಬೇಕು (ಹಸುರು ಹೊನ್ನಿನಲ್ಲಿ ಬರುವ ಕತ್ತೆಗಳ ವಿಷಯ ಕೂಡ ನಿಜವಾಗಿ ನಡೆದಿದ್ದೇ?... ತಿಳಿದವರು ಹೇಳಿದರೆ ಒಳ್ಳೆಯದು).

ಡಾ.ಸ್ವಾಮಿಯವರ ಇತರ ಪುಸ್ತಕಗಳಾದ "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ" ಮತ್ತು "ಕಾಲೇಜು ರಂಗ" ಮನೆಯಲ್ಲಿವೆ. ಅವನ್ನೂ ಓದಲೇಬೇಕು ಎಂಬಷ್ಟು ಡಾ.ಸ್ವಾಮಿಯವರ ಬರೆಹ ಇಷ್ಟವಾಗಿದೆ. ಅದಕ್ಕೆ ಸಮಯ ಯಾವಾಗ ಸಿಗುತ್ತದೆಯೋ ತಿಳಿಯದು.

Tuesday, January 09, 2007

kathAmRita - The nectar of stories

Recently, I read kathAmR^ita, A.R.Krishnashastri's Kannada precis-translation of the kathAsaritsAgara of sOmadEva, which is again a translation of guNADhya's bR^ihatkathA written in paishAcI. It was a jolly read, and mighty thought-provoking too. After I read it, I realized why Dr. Ganesh said that if one wanted to see celebration of life, it was in works like kathAmR^ita.

This was not my first reading of kathAmR^ita. I had read it when I was very young - probably in my third or fourth grade. My aunt saw me reading this book, and told my Mom about it - "She turned the page, and it was so dirty!!". I was then too young to glean anything from the stories I read... I just read them because they were stories. This time, though, it was different.

kathAmRita means 'nectar of stories'. The main story is that of naravAhanadatta, son of udayana and vAsavadattA, predicted to rule the vidyAdhara kingdom for one kalpa. udayana and vAsavadattA and their ministers are made immortal in bhAsa's plays 'svapnavAsavadattam' and 'pratijnAyaugandharAyaNam'. Both of them are based on bR^ihatkathA. The all-time classic pa~Jcatantra and vEtAlapa~JchavimshatI (the famous vikram and bEtAl) have their roots in the bR^ihatkathA. In fact, guNADhya's life-history itself (why he stopped using samskR^itam and took to paishAcI) is a very interesting story. The king of whom guNADhya was serving, outsmarted by his wife, wanted to learn samskR^itam as soon as possible. guNADhya said that he could teach him in 6 years, while vararuci, another celebrated grammarian of his time, said that he could do it in six months. guNADhya challenged him, saying that he would not use samskR^itam if he did it. guNADhya lost the bet and gave up samskR^itam. The slighted guNADhya left for the forest and met the pishAcha kANabhUti and heard seven stories of seven vidyAdharas. He wrote them in paishAchI language and took it to the king. The king, well versed in samskrt now, refused to read a work that was written in a lowly language. guNADhya then started reading his stories to the animals of the forest and destroying them in the fire. The animals absorbed in the stories, forgot eating and drinking. The king, surprised at the lean meat served to him, learned that guNADhya was the reason for the lean-ness of the animals. He immediately went to the forest to make peace with guNADhya. guNADhya was then reading out the last story, that of naravAhanadatta. The king obtained the manuscript of that story and made it famous in his kingdom.

In the kathAsaritsAgara, the characters in the main story relate stories of other characters who in turn relate others' stories and so on, like a stack. You keep pushing stories in and then pop them out. There are stories of merchants, kings, poor people, learned brahmins, thieves, fools, prostitutes, kulastrIs, yOginis, bEtALas, adventurers, devotees and what not. The diverse nature of the stories makes it extremely enjoyable. Only in a collection like kathAmR^ita can you find the story of a bOdhisattva immediately after the story of fools. This is, in a way, the great thing about kathAmRita. Nothing is embellished. There is no meaningless orthodoxy and sentimentality. Nothing is looked down upon. The importance of dharma is stressed, but it does not feel like dry preaching.

Tragedies are rare, almost non-existent in traditional Indian literature. In many stories of the kathAmRita, even partners who have died come back to life through the grace of some deity. The Indian mentality is really amazing. In spite of the hardships faced by men and women (at least in stories), they nurse the hope of a better future for themselves and their loved ones. No story ends in separation or death. Here, all journeys really end in lovers' meeting. If a son or a wife or a parent is lost in the beginning of the story, you can be sure that he/she/they will be found miraculously before the story ends. The same trait is seen in Indian cinema also. We are not used to tragedies, however convincing they may be. A while ago, I was reading Steinbeck's "Pearl", and was desperately hoping that the Sea-Goddess or something or someone would come and make the dead baby alive again. Yesterday, I was watching 'ondu muttina kathe', directed by Shankar Nag. It is an Indian adaptation of "Pearl". I found it very difficult to watch the movie, because of the horrible things that happen to Kino and his wife. It is my Indian upbringing, you see... Sorry for digressing, but the point I wanted to make was that the Indian mind is not comfortable with tragedies. Bhavabhuti, in his uttararAmacharitam, united sItA with rAma, though tradition says that sItA was absorbed by Mother Earth. Kalidasa does not end raghuvamsha with agnivarNa's death, but with the coronation of his unborn child. Endings of stories are similar even in kathAmRita. This is in stark contrast with western literature, where tragedies are very common. Even western religion is gloomy, in that the End of Days and the Judgement Day are given a lot of importance.

The very appealing thing about kathAmRita is that many of the characters are not black and white, but different shades of grey. This kind of characterization is really an achievement. Nobody can be fully evil or really angelic. This grey nature of humans is what makes life so interesting. That is what makes kathAmRita interesting, too.

One point I really want to write about is the extoling of dharma in the book. There are some principles like "ahimsA satyamasteyam brahmacharyam dhRutiH kShamA", that need to be followed always, everywhere. But as far as my understanding goes, social laws a few centuries ago (my sources are a few books that I have read and some discussions with people I consider very learned) were not as stringent as they are now. That is thankfully changing, but imo this change is making people rootless. What we need is a change for the better, while being rooted firmly. When it comes to inheritance rights and marital rights, Indian society was far advanced than it is now.

When I was reading through the preface of the kathAmRita, I was very angry with the way women were thought of. A woman is always expected to be obliging and pleasing and be pleased, and docile and what not. I do not know when this sort of thinking started, but when I read through kathAmrita, I found more instances of confident and free women than I did of docile women. Probably this was the way of the society then. They probably enjoyed much more rights than we do now. Was it because it was much safer then than it is now? I do not know! I do not want to dwell on this topic, for fear of being labelled a feminist.

A fitting end to the story is the going back of guNADhya and others to kailAsa. After all, after the joys and sorrows of life, that is the goal!

Saturday, July 03, 2004

FrontPage magazine.com :: How the West Grew Rich by Dinesh D'Souza

FrontPage magazine.com :: How the West Grew Rich by Dinesh D'Souza
ಈ ಲೇಖನದ ಲೇಖಕ "oreo" ಅಥವಾ "coconut" ಎಂದು ಖ್ಯಾತನಾದವನು. ಇದರ ಅರ್ಥವೇನೆಂದರೆ ಮೇಲುಗಡೆ ಕಪ್ಪು ಚರ್ಮವಿದ್ದರೂ ಒಳಗಡೆಯ ಯೋಚನೆಗಳೆಲ್ಲಾ ಯೂರೋಪಿಯನ್ನರ ತೆರ, ತಾನು ಯೂರೋಪಿಯನ್ನರಂತೆ ಎನ್ನುವ ಹುಸಿ ಹಮ್ಮು. ಇವನನ್ನು ಹೀಗೇಕೆ ಕರೆಯುತ್ತಾರೆಂದು ಈ ಒಂದು ಲೇಖನವನ್ನು ಓದಿದರೆ ಸಾಕು, ಚೆನ್ನಾಗಿ ಅರ್ಥವಾಗುತ್ತದೆ.

ನನ್ನ ಹಿಂದಿನ ಒಂದು ಬ್ಲಾಗ್ ನಲ್ಲಿ ಜಪಾನ್ ಮತ್ತು ಭಾರತದ ಆತ್ಮವನ್ನೇ ಕೊಳ್ಳೆ ಹೊಡೆದದ್ದು ಪಶ್ಚಿಮ ಎಂದು ಬರೆದಿದ್ದೇನೆ. ಈ ಮನುಷ್ಯನ ಪ್ರಕಾರ ಆ ರೀತಿ ಕೊಳ್ಳೆ ಹೊಡೆದರೂ ಪರವಾಗಿಲ್ಲವಂತೆ, ಏಕೆಂದರೆ ಅನಂತರದ ಪೀಳಿಗೆಗಳಿಗೆ ವಿಜ್ಞಾನ, ಡೆಮಾಕ್ರಸಿ ಮುಂತಾದ ಸೌಲಭ್ಯಗಳು ಇಂಗ್ಲೀಷರಿಂದಲೇ ಅಂತೆ ಸಿಕ್ಕಿದ್ದು. ಈ ವಾದದಲ್ಲಿ ಹುರುಳೇ ಇಲ್ಲ ಎಂದು ತಿಳಿಯುವುದು ಕಷ್ಟವಲ್ಲ.

ನಾನು ಬಹಳ ಜನರ ಜೊತೆ ವಾದಿಸುತ್ತೇನೆ, ಭಾರತೀಯ ವಿಜ್ಞಾನದ ಬಗ್ಗೆ. ಬಹಳ ಜನರ ಪ್ರಕಾರ ಭಾರತದಲ್ಲಿ ವಿಜ್ಞಾನದಲ್ಲಿ ಸಾಧನೆಯಾಗಿದ್ದು ಪಾಶ್ಚಾತ್ಯರ ಸಂಪರ್ಕವಾದ ನಂತರವೇ ಎಂದು. ಈ ವಿಚಾರ ಸ್ವಲ್ಪವೂ ಸರಿಯಿಲ್ಲ. ಭಾರತ ಕೇವಲ "ಶೂನ್ಯ"ವನ್ನು ಕಂಡುಹಿಡಿಯಲಿಲ್ಲ. Linear indeterminate equations ಎನ್ನುವ ಒಂದು ಜಾತಿಯ ಸಮೀಕರಣಗಳನ್ನು ಬಿಡಿಸುವ ಪದ್ಧತಿ ಮೊದಲ ಬಾರಿಗೆ ಭಾರತದಲ್ಲಿ ೧೨ ನೇ ಶತಮಾನದಲ್ಲಿ ಕಂಡು ಹಿಡಿಯಲಾಯಿತು. "ಕುಟ್ಟಕ" ಎಂದು ಈ ಪದ್ಧತಿಯ ಹೆಸರು. ಆದರೆ ಈಗ ವಿಜ್ಞಾನ ಪ್ರಪಂಚದಲ್ಲಿ ಇದನ್ನು ಏನೆಂದು ಕರೆಯುತ್ತಾರೆ ಗೊತ್ತೆ? "Diophantine Equations" ಎಂದು! ಹಾಗೆಯೇ Quadratic indeterminate equations ಎನ್ನುವ ಸಮೀಕರಣಗಳನ್ನು "ವರ್ಗಪ್ರಕೃತಿ" ಎಂಬ ಪದ್ಧತಿಯನ್ನು ಉಪಯೋಗಿಸಿ ಬಿಡಿಸುವುದೂ ಭಾರತದಲ್ಲಿ ಹುಟ್ಟು ಪಡೆಯಿತು. ಈ ಸಮೀಕರಣಗಳನ್ನು "Fermat Equations" ಎಂದು ಕರೆಯುತ್ತಾರೆ! ಹೋಗಲಿ ಎಂದರೆ Fermat ಈ ಸಮೀಕರಣಗಳನ್ನು ಬಿಡಿಸಲೂ ಇಲ್ಲ, ಕೇವಲ propose ಮಾಡಿದ ಅಷ್ಟೆ! ಬೌಧಾಯನ ಸೂತ್ರ ಅಥವಾ Pythagoras theorem ಅಂತೂ ಸರ್ವವಿದಿತ. ಇನ್ನು ವರಾಹಮಿಹಿರ (೯ ನೇ ಶತಮಾನ) ಗ್ರಹಣಗಳ ಸಮಯಗಳನ್ನು ನಿಖರವಾಗಿ ಕಂಡುಹಿಡಿಯುವುದರಲ್ಲಿ ಸುಮಾರು ಮೊದಲಿಗ. ಇದನ್ನು ಯಾರಾದರೂ ನೆನೆಯುತ್ತಾರೆಯೇ? ಇಲ್ಲ! ಪ್ರಪಂಚದ ವಯಸ್ಸನ್ನು ೮.೪ ಬಿಲಿಯನ್ ವರ್ಷಗಳು ಎಂದು ಪ್ರಪ್ರಥಮವಾಗಿ ಪ್ರತಿಪಾದಿಸಿದ್ದು ನಮ್ಮಲ್ಲಿ. Trigonometry ಯಲ್ಲಿ ಕೂಡ ನಮ್ಮ ಗಣಿತಜ್ಞರು ಸಾಧನೆಯನ್ನು ಮಾಡಿದ್ದರು. ಇವೆಲ್ಲವನ್ನೂ ತಿಳಿಯದಿದ್ದರೆ ಈ ಲೇಖಕನಂತೆ ignorant ಆಗಿರುತ್ತೇವೆ ಅಷ್ಟೆ.

ಇದೆಲ್ಲ ಸರಿ, ಆದರೆ ತಂತ್ರಜ್ಞಾನದಲ್ಲಿ ಭಾರತ ಬಹಳ ಹಿಂದುಳಿದಿತ್ತು, ಅದನ್ನು ಬ್ರಿಟಿಷರು ಉದ್ಧರಿಸಿದರು ಎಂದು ಬಹಳ ಜನರ ವಾದ. ಇದರಲ್ಲೂ ಹುರುಳಿಲ್ಲ. ೧೭ ನೇ ಶತಮಾನಕ್ಕೆ ಮುಂಚೆ ಬ್ರಿಟನ್ ತಂತ್ರಜ್ಞಾನದಲ್ಲಿ ಮುಂದುವರೆದಿತ್ತೆ? ಖಂಡಿತ ಇಲ್ಲ. ಬ್ರಿಟನ್ನಿನ Industrial Revolution ಗೆ ಹಣ ಮತ್ತು ಮೂಲ ಸಾಮಗ್ರಿಗಳು ಬಂದಿದ್ದು ಭಾರತ, ಮುಂತಾದ ದೇಶಗಳಿಂದಲೇ. ಈ ಮೂಲ ಸಾಮಗ್ರಿಗಳನ್ನು ಪಡೆಯಲು ಬ್ರಿಟನ್ ಅತಿನೀಚ ಕೃತ್ಯಗಳನ್ನು ಎಸಗಿತು. ಕೇವಲ cash crops ಅನ್ನು ಬೆಳೆಯುವಂತೆ ಆದೇಶಿಸಿ ಜನರಿಗೆ ಊಟವಿಲ್ಲದಂತೆ ಮಾಡಿತು. ಇನ್ನು ಹಣದ ಮಾತು: ರಾಬರ್ಟ್ ಕ್ಲೈವ್ ನ ಕೊಳ್ಳೆ ಇತ್ತೀಚೆಗೆ ಮಿಲಿಯಗಟ್ಟಲೆ ಪೌಂಡುಗಳಿಗೆ ಮಾರಾಟವಾಯಿತು. ಈ ದುರಾಚಾರಗಳನ್ನೆಲ್ಲ ಮರೆತು DD ಯಂಥವರು ಅದು ಹೇಗೆ "ಪಾಶ್ಚಾತ್ಯರೇ ಪ್ರಪಂಚವೆಲ್ಲದರ ಒಳಿತಿಗೆ ಕಾರಣ" ಎಂದು ಹೇಳುತ್ತಾರೋ ದೇವರೇ ಬಲ್ಲ.

ಇದು ಕೇವಲ ಭಾರತದ ಕಥೆಯಲ್ಲ. "White man's burden" ಎಂಬ ನೆಪದಲ್ಲಿ ಎಲ್ಲ ದೇಶಗಳಲ್ಲಿಯೂ ಬ್ರಿಟನ್ ತನ್ನ ಸ್ವಾಮ್ಯವನ್ನು ಸ್ಥಾಪಿಸಿ ಸಂಪತ್ತನ್ನು ಕೊಳ್ಳೆ ಹೊಡೆದು, ಕ್ರೈಸ್ತ ಮತವನ್ನು ಬಲವಂತವಾಗಿ ಹೇರಿತು. ಈ ದೇಶಗಳಿಗೆ ಬ್ರಿಟನ್ನಿನಿಂದ ಸಹಾಯವಾಗಿದೆ ಎಂಬುದು ಸತ್ಯ. ಆದರೆ ಈ ಸಹಾಯದ ನೂರರಷ್ಟು ಈ ದೇಶಗಳಿಂದ ಬ್ರಿಟನ್ನಿಗೆ ಆಗಿದೆ ಎಂಬುದೂ ಅಷ್ಟೇ ಸತ್ಯ. ಬ್ರಿಟನ್ ಈಗ developed ದೇಶವಾಗಿರುವುದು ಭಾರತ ಮುಂತಾದ ದೇಶಗಳಿಂದ.

ಈಗ ನನ್ನ ಮುಂದೆ ಇರುವ ಪ್ರಶ್ನೆ - ಅಕಸ್ಮಾತ್ ಬ್ರಿಟನ್ ನಮ್ಮ ದೇಶವನ್ನು ಆಳದಿದ್ದರೆ ನಾವು ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿದ್ದೆವೇ? ನನ್ನ ಪ್ರಕಾರ ಹೌದು, ಖಂಡಿತ. ಆದರೆ ನಮಗೆ ಅವಕಾಶವೇ ಸಿಗಲಿಲ್ಲವೇ!